ಮಡಿಕೇರಿ, ಸೆ. 2: ಇತ್ತೀಚೆಗೆ ಕಕ್ಕಬೆಯ ಭಗವತಿ ದೇವಾಲಯದ ಬಳಿ ಗೋವುಗಳ ಕಾಲುಗಳನ್ನು ಕತ್ತರಿಸಿಟ್ಟು ಅಪವಿತ್ರ ಮಾಡಿದ ಘಟನೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು. ಭಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಹಾಗೂ ವಿಹಿಪಂ ತಾಲೂಕು ಅಧ್ಯಕ್ಷ ಜಗತ್ ಮಾತನಾಡಿ ಗೋವುಗಳ ಕಾಲುಗಳನ್ನು ಕತ್ತರಿಸಿಟ್ಟ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ತಪ್ಪಿದ್ದಲ್ಲಿ ಕೊಡಗು ಬಂದ್ ಮಾಡಲಾಗುವದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ತಾ.ಪಂ. ಸದಸ್ಯರಾದ ಜನಿಶ್, ಅಜಿತ್ ಕರುಂಬಯ್ಯ, ಬಿಜೆಪಿ ಪ್ರಮುಖರಾದ ಕೆ.ಡಿ. ನಾಣಯ್ಯ, ಸುರೇಶ್, ಪ್ರವೀಣ್, ಕಂಠಿಕಾರ್ಯಪ್ಪ ಇತರರು ಇದ್ದರು.