ಗೋಣಿಕೊಪ್ಪಲು, ಸೆ. 4 : ಕರ್ನಾಟಕ ಐಸಿಎಸ್‍ಇ ಸ್ಕೂಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಜಯಪ್ರಕಾಶ್ ನಾರಾಯಣ ಕ್ರೀಡಾಂಗಣದಲ್ಲಿ ನಡೆದ ಅಂತರ ಶಾಲಾ ಕ್ರೀಡಾಕೂಟದಲ್ಲಿ ಇಲ್ಲಿನ ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ಕ್ರೀಡಾಪಟುಗಳಿಗೆ 14 ಪ್ರಶಸ್ತಿಗಳು ಲಭಿಸಿವೆ.

ಓಟ ಹಾಗೂ ಹರ್ಡಲ್ಸ್ ವಿಭಾಗದಲ್ಲಿ ಒಟ್ಟು 6 ಚಿನ್ನ, 4 ಬೆಳ್ಳಿ, 4 ಕಂಚಿನ ಪದಕವನ್ನು ಗೆದ್ದುಕೊಂಡಿದೆ.ಅಕ್ಟೋಬರ್‍ನಲ್ಲಿ ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿರಿಯ ಬಾಲಕರ ವಿಭಾಗದಲ್ಲಿ 800 ಮೀ ಓಟದಲ್ಲಿ ಸುಮುಖ್ ರಾಘವೇಂದ್ರ ಹಾಗೂ ಜೆ ಎಸ್ ಯಶ್ವಂತ್‍ಗೆ ಚಿನ್ನ, ಯಶ್ವಂತ್‍ಗೆ 400 ಮೀ ನಲ್ಲಿ ಕಂಚು, ಆರ್‍ಎಂ ನಿಕ್ಷಿತ್‍ಗೆ 400 ಮೀ ನಲ್ಲಿ ಚಿನ್ನ, ಲೌಖಿಕ್ ಅಯ್ಯಪ್ಪಗೆ 800 ಮೀ ನಲ್ಲಿ ಬೆಳ್ಳಿ, 400 ಮೀ ನಲ್ಲಿ ಕಂಚು, ಲಾಂಗ್ ಜಂಪ್‍ನಲ್ಲಿ ಜಿ ಪ್ರಣವ್‍ಗೆ ಕಂಚಿನ ಪದಕ ದೊರೆಯಿತು.

ಹಿರಿಯ ಬಾಲಕಿಯರ ವಿಭಾಗದಲ್ಲಿ ಸಿಮ್ಲಾ ಗಣಪತಿಗೆ 800 ಮೀಟರ್‍ನಲ್ಲಿ ಚಿನ್ನ, ಹೈಜಂಪ್‍ನಲ್ಲಿ ಕಂಚು, ಬಿ ಡಿ ದೃತಿಗೆ 800 ಮೀಟರ್‍ನಲ್ಲಿ ಬೆಳ್ಳಿ, ಕೆ ಎಸ್ ನಿಕ್ಷಿತಾಗೆ 3 ಕಿ ಮೀ ನಡಿಗೆಯಲ್ಲಿ ಚಿನ್ನ, ಎನ್‍ಎಸ್ ಸಿಂಚನಾಗೆ 3 ಕಿ ಮೀ ನಡಿಗೆಯಲ್ಲಿ ಬೆಳ್ಳಿ, ಹರ್ಡ್‍ಲ್ಸ್‍ನಲ್ಲಿ ಸಿಮ್ಸಾ ಗಣಪತಿಗೆ ಚಿನ್ನ, 400 ಮೀ ಓಟದಲ್ಲಿ ಬೆಳ್ಳಿ ಪದಕ ಬಂದಿದೆ. ದೀಪಕ್ ಮತ್ತು ಜಗದೀಶ್ ತರಬೇತುದಾರರಾಗಿ ಪಾಲ್ಗೊಂಡಿದ್ದರು.