ಮಡಿಕೇರಿ, ಸೆ. 6: ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಪಾಲಿಬೆಟ್ಟ ಮತ್ತು ಸುಂಟಿಕೊಪ್ಪ ಇವರ ವತಿಯಿಂದ ತಾ. 10 ರಂದು ಬೆಳಿಗ್ಗೆ 9.30 ಗಂಟೆಗೆ ವಿಶೇಷ-ಚೇತನ ಮಕ್ಕಳು ಮತ್ತು ಭಾರತೀಯ ವಿದ್ಯಾಭವನದ ‘ಕಲಾಭಾರತಿ’ಯಲ್ಲಿ ಕಲೆಯನ್ನು ಅಭ್ಯಾಸ ಮಾಡುತ್ತಿರುವ ಸಾಮಾನ್ಯ ಮಕ್ಕಳ ನಡುವೆ ಸೃಜನಾತ್ಮಕವಾದ ಒಂದು ದಿನದ ಕಲಾಸ್ಪಂದನದ ಕಾರ್ಯಕ್ರಮ ಸುಂಟಿಕೊಪ್ಪದ ಸ್ವಸ್ಥ ಕೇಂದ್ರದಲ್ಲಿ ನಡೆಯಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಹಿರಿಯ ಕಲಾವಿದರಾದ ಪ್ರಸನ್ನ ಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ. ವಿಶೇಷ ಚೇತನ ಮತ್ತು ಸಾಮಾನ್ಯ ಮಕ್ಕಳ ನಡುವಿನ ಸಂವೇದನೆಗಳ ಮಿಳಿತ ಮತ್ತು ‘ಸಹಭಾಗಿತ್ವದಲ್ಲಿ ಸಾಮಾಜಿಕ-ಕಲಾ ಅಭಿವ್ಯಕ್ತಿ’ಯನ್ನು ಹೊರತರುವದೇ ಈ ಅನನ್ಯ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.