ಮಡಿಕೇರಿ, ಸೆ. 7 : ವರ್ಷಂಪ್ರತಿ ವಿಭಿನ್ನತೆಯಿಂದ ಕೂಡಿರುವ ಇಲ್ಲಿನ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಸಿಸುವ ಗಣೇಶ ಉತ್ಸವ ಮೂರ್ತಿ ವಿಸರ್ಜನಾ ಕಾರ್ಯ ನಿನ್ನೆ ರಾತ್ರಿ ಅದ್ದೂರಿಯಾಗಿ ನೆರವೇರಿತು.

‘ಮೂಷಿಕಾಸುರನ ಶಾಪ ವಿಮೋಚನೆ’ಯ ಕಥಾಹಂದವನ್ನು ಹೆಣೆಯಲಾಗಿದ್ದ ಚಲನ-ವಲನಗಳನ್ನೊಳಗೊಂಡ ಕಲಾಕೃತಿಗಳ ಭವ್ಯ ಮಂಟಪದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆಯಲ್ಲಿ ಸಾಗಿ ಗೌರಿ ಕರೆಯಲ್ಲಿ ವಿಸರ್ಜಸಲಾಯಿತು.

ಶೋಭಾಯಾತ್ರೆಯಲ್ಲಿ ಕಲಾಕೃತಿಗಳ ಮಂಟಪ ಪ್ರದರ್ಶನ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ವೀಕ್ಷಿಸಿದರು. ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ ವೇಳೆ ಜನರು ಕಟ್ಟಡ, ಬಸ್‍ಗಳ ಮೇಲೇರಿ ಕುಳಿತು ಪ್ರದರ್ಶನ ವೀಕ್ಷಿಸುತ್ತಿದ್ದ ದೃಶ್ಯ ಗೋಚರಿಸಿತು. ವಾಹನ-ಜನದಟ್ಟಣೆ ನಿಭಾಯಿಸಲು ಪೊಲೀಸರು ಸಹಕರಿಸಿದರು.