ಸೋಮವಾರಪೇಟೆ, ಸೆ. 10: ದಾನಿಗಳೇ ಸದಸ್ಯರಾಗಿರುವ ಇಲ್ಲಿನ ಸಾರ್ವಜನಿಕ ಗೌರಿ ಗಣಪತಿ ಸೇವಾ ಸಮಿತಿಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಡೆಸಿದ ಉತ್ಸವದ ಲೆಕ್ಕಪತ್ರ ಮಂಡನೆಯನ್ನು ತಾ. 15ರಂದು ಪತ್ರಿಕಾ ಭವನದಲ್ಲಿ ಮಂಡಿಸಲಾಗುವದು ಎಂದು ಸಮಿತಿ ಅಧ್ಯಕ್ಷ ಚಂದನ ಸುಬ್ರಮಣಿ ತಿಳಿಸಿದರು. ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ದಾನಿಗಳು, ಪೂರ್ವಾಧ್ಯಕ್ಷರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರುಗಳ ಶ್ರಮದಿಂದ 10ನೇ ವರ್ಷದ ಉತ್ಸವ ಅತ್ಯಂತ ಯಶಸ್ವಿಯಾಗಿದೆ. ಸಾರ್ವಜನಿಕ ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಉತ್ಸವ ನಡೆದಿದ್ದು, ಇದರ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ತಾ. 15 ರಂದು ಸಂಜೆ 5 ಗಂಟೆಗೆ ಪತ್ರಿಕಾ ಭವನದಲ್ಲಿ ಮಂಡಿಸಲಾಗುವದು ಎಂದರು. ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ದರ್ಶನ್ ಜೋಯಪ್ಪ, ಉಪಾಧ್ಯಕ್ಷ ಎಂ.ಬಿ. ಉಮೇಶ್, ಖಜಾಂಚಿ ರಂಗಸ್ವಾಮಿ ಬಿ.ಎನ್., ಸಹ ಕಾರ್ಯದರ್ಶಿ ಬೀರೇಬೆಟ್ಟ ವೇಣು ಅವರುಗಳು ಉಪಸ್ಥಿತರಿದ್ದರು.