ಕುಶಾಲನಗರ, ಸೆ. 10: ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ಧಿ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಕೈಲ್‍ಮುಹೂರ್ತ ಹಬ್ಬದ ಸಂತೋಷ ಕೂಟ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷರಾದ ಪೊಟ್ಟಂಡ ಗಣೇಶ್ ಅಧ್ಯಕ್ಷತೆಯಲ್ಲಿ ಗುಮ್ಮನಕೊಲ್ಲಿಯ ಸಂಘದ ನಿವೇಶನದಲ್ಲಿ ನಡೆದ ಸಭೆಯಲ್ಲಿ ಮೃತಪಟ್ಟ ಸಂಘದ ಹಿಂದಿನ ಸಾಲಿನ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಕಳೆದ ಸಾಲಿನ ಮಹಾಸಭೆಯ ನಡಾವಳಿ, ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಓದಿ ಅಂಗೀಕರಿಸಲಾಯಿತು. 2016-17ನೇ ಸಾಲಿನಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರೋತ್ಸಾಹ ಬಹುಮಾನ ವಿತರಿಸಿದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ, ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಹಾಗೂ ದಾನಿಗಳಿಗೆ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭೆಯ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಕಾಫಿ ಬೆಳೆಗಾರರಾದ ಕೊರಕುಟ್ಟಿರ ನಂಜಪ್ಪ, ನಿವೃತ್ತ ಅರಣ್ಯಾಧಿಕಾರಿ ಕುಶಾಲನಗರದ ಚಳಿಯಂಡ ಅಚ್ಚಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರಾದ ಕೊಂಗೇಪಂಡ ಶಶಿ ಭೀಮಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ದೇವಯ್ಯ ಇದ್ದರು.

ಸಂಘದ ಉಪಾಧ್ಯಕ್ಷ ಚಂಗಚಂಡ ಬಿ ಸುಬ್ರಮಣಿ, ಕಾರ್ಯದರ್ಶಿ ಪಾನಿಕುಟ್ಟಿರ ಡಿ.ಕಾವೇರಮ್ಮ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.