ಹೊದ್ದೂರು, ಸೆ. 12: ಸನಿಹದ ಹೊದ್ದೂರು ಕಣ್ವಬಲಮುರಿ ಸ್ಫೋಟ್ಸ್ ಕ್ಲಬ್‍ನ ಆಶ್ರಯದಲ್ಲಿ 63ನೇ ವಾರ್ಷಿಕ ಕೈಲುಮೂಹೂರ್ತ ಹಬ್ಬದ ಪ್ರಯುಕ್ತ ಕ್ರೀಡಾಕೂಟ ನಡೆಯಿತು.

ವಾಟೇಕಾಡು ಪ್ರಾಥಮಿಕ ಶಾಲೆಯಲ್ಲಿ ಆಯೋಜಿತವಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಣ್ವ ಬಲಮುರಿಯ ನೆರವಂಡ ಮೊಣ್ಣಪ್ಪ (ದೊರೆ) ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಸೈನಿಕ ಕೆ.ಆರ್. ಶಮಕರ್ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಕ್ಲಬ್‍ನ ಮಾಜಿ ಉಪಾಧ್ಯಕ್ಷ ಚೈಯ್ಯಂಡ ಗಣಪತಿ, ಅಧ್ಯಕ್ಷ ಹೆಚ್.ಪಿ. ಮನೋಹರ್, ಉಪಾಧ್ಯಕ್ಷ ಚೈಯ್ಯಂಡ ರಘ ತಿಮ್ಮಯ್ಯ, ಸ್ಥಾಪಕ ಕೆ. ಎಂ. ಲಿಂಗಪ್ಪ ಉಪಸ್ಥಿತರಿದ್ದರು. ಸುಮಿತ್ರಾ ಪ್ರಾರ್ಥಿಸಿ, ಶಿಕ್ಷಕಿ ಚೈಯ್ಯಂಡ ಕಸ್ತೂರಿ ಸ್ವಾಗತಿಸಿ, ನಿರೂಪಿಸಿದರು. ಮಾಜಿ ಸೈನಿಕ ವಿ.ಎಂ. ಸುಬ್ರಮಣಿ ವಂದಿಸಿದರು.