ಮಡಿಕೇರಿ, ಸೆ. 11: 2017ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ನಡೆಯಿತು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಭಯ ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯಲಕ್ಷ್ಮಿ ಕಟ್ಟದಮೂಲೆ ಪ್ರಥಮ, ಶಾರದಾ ಎಸ್. ಭಟ್ ಕಾಡಮನೆ ದ್ವಿತೀಯ ಹಾಗೂ ಅಂಜಲಿ ಹೆಗಡೆ ಬೆಂಗಳೂರು ತೃತೀಯ ಬಹುಮಾನದ ಪ್ರಶಸ್ತಿಯನ್ನು ಸ್ವೀಕರಿಸಿದರು. 1996ರಲ್ಲಿ ಪ್ರಾರಂಭವಾದ ಕೊಡಗಿನ ಗೌರಮ್ಮ ವೇದಿಕೆಗೆ ಕಾರಣಕರ್ತರಾದ ಏತಡ್ಕ ಮನೆತನದವರಲ್ಲೊಬ್ಬರಾದ ಚಂದ್ರಶೇಖರ ಏತಡ್ಕ, ಸ್ಪರ್ಧಾ ವೇದಿಕೆಯ ಅಧ್ಯಕ್ಷೆ ಈಶ್ವರಿ ಬೇರ್ಕಡವು ವೇದಿಕೆಯಲ್ಲಿದ್ದರು. ಸಂಚಾಲಕಿ ವಿಜಯಾ ಸುಬ್ರಮಣ್ಯ ಕುಂಬಳೆ ನಿರೂಪಿಸಿದರು.