ಕುಶಾಲನಗರ, ಸೆ. 12: ಎಐಎಡಿಎಂಕೆಯ ಟಿವಿವಿ ದಿನಕರನ್ ಬಣದ ಸುಮಾರು 20 ಮಂದಿ ಶಾಸಕರು ತಾ. 7 ರಿಂದಲೇ 7ನೇ ಹೊಸಕೋಟೆ ಸಮೀಪ ತೊಂಡೂರು ಗ್ರಾಮದಲ್ಲಿರುವ ಪಾಡಿಂಗ್‍ಟನ್ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದಾರೆ. ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದ ಬಣಕ್ಕೆ ವಾಲದಂತೆ ಈ ಶಾಸಕರನ್ನು ತಮ್ಮ ವಶದಲ್ಲಿಟ್ಟುಕೊಳ್ಳುವ ದೃಷ್ಟಿಯಿಂದ ಶಶಿಕಲಾ ನಿಷ್ಠರಾದ ದಿನಕರನ್ ಅವರು ತಾತ್ಕಾಲಿಕವಾಗಿ ಕೊಡಗಿನ

(ಮೊದಲ ಪುಟದಿಂದ) ಈ ರೆಸಾರ್ಟ್‍ನಲ್ಲಿ ಸುರಕ್ಷಿತವಾಗಿರಿಸಿರುವದಾಗಿ ತಿಳಿದು ಬಂದಿದೆ.ಈ ಶಾಸಕರುಗಳು ಬುಧವಾರದವರೆಗೆ ತಂಗುವ ಉದ್ದೇಶ ಹೊಂದಿದ್ದು, ಇದೀಗ ಇನ್ನೆರಡು ದಿನ ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಈ ನಡುವೆ ತಮಿಳುನಾಡಿನ ಮಾಜಿ ಸಚಿವ ಪಳನಿಯಪ್ಪನ್ ಅವರು ಕೂಡ ಈ ತಂಡದಲ್ಲಿದ್ದು, ನಿನ್ನೆ ದಿನ ಅವರು ತಮ್ಮ ಕೊಠಡಿಯನ್ನು ತೆರವುಗೊಳಿಸಿ ಹಿಂತಿರುಗಿದ್ದಾರೆ. ಇಂದು ತಮಿಳುನಾಡಿನ ಸಿಐಡಿ ಪೊಲೀಸರು ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಳನಿಯಪ್ಪನ್ ಅವರನ್ನು ಅರಸಿಕೊಂಡು ರೆಸಾರ್ಟ್‍ಗೆ ಬಂದಾಗ ಅವರಿಗೆ ನಿರಾಶೆಯಾಯಿತು. ಬರಿಗೈಯಲ್ಲಿ ಹಿಂತಿರುಗಿದರು.