ಮಡಿಕೇರಿ, ಸೆ. 12: ಜನೋತ್ಸವ ಮಡಿಕೇರಿ ದಸರಾ ಪ್ರಯುಕ್ತ ಪತ್ರಿಕಾ ಭವನದಲ್ಲಿ ತಾ. 17 ರಂದು ಪತ್ರಕರ್ತರಿಗೆ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾಕೂಟ ಆಯೋಜಿಸಲಾಗಿದೆ. ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ಸಹಯೋಗದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಸ್ಪರ್ಧೆ ಆಯೋಜಿಸಿದೆ.

ಕೇರಂ, ಟೇಬಲ್ ಟೆನ್ನಿಸ್ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಡಬಲ್ಸ್ ವಿಭಾಗದ ಜೋಡಿ ಆಯ್ಕೆ ಆಟಗಾರರೇ ಮಾಡಿಕೊಳ್ಳಬೇಕು. ಇದರೊಂದಿಗೆ ಚೆಸ್, ರೆಮ್ಮಿ ಸ್ಪರ್ಧೆ ನಡೆಯಲಿದೆ. ಆಟಗಾರರು ಕ್ರೀಡಾಕೂಟದ ಸಂಚಾಲಕ ಸುವರ್ಣ ಮಂಜು (9513389107) ಅವರಲ್ಲಿ ತಾ. 15 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.