ಕುಶಾಲನಗರ, ಸೆ 12: ಕುಶಾಲನಗರ ರೋಟರಿ ಸಂಸ್ಥೆ ಆಶ್ರಯದಲ್ಲಿ ಚಿಕ್ಲಿಹೊಳೆ ಜಲಾಶಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ರೋಟರಿ ಪದಾಧಿಕಾರಿಗಳು ಜಲಾಶಯದ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಬಾಟಲಿಗಳನ್ನು ಸಂಗ್ರಹಿಸಿ ವಿಲೇವಾರಿಗೊಳಿಸಿದರು.

ಈ ಸಂದರ್ಭ ರೋಟರಿ ಅಧ್ಯಕ್ಷ ಎನ್.ಜಿ. ಪ್ರಕಾಶ್, ಕಾರ್ಯದರ್ಶಿ ಹರೀಶ್, ಪ್ರಮುಖರಾದ ಎಸ್.ಕೆ. ಸತೀಶ್, ಕ್ರಿಜ್ವಲ್ ಕೋಟ್ಸ್, ಡಾ. ಹರಿ ಎ ಶೆಟ್ಟಿ ಮತ್ತಿತರರು ಇದ್ದರು.