ಕುಶಾಲನಗರ, ಸೆ. 11: ಕಾವೇರಿ ಮಹಾಪುಷ್ಕರದ ಸ್ನಾನಾಚರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸೇರಿದಂತೆ ತಮಿಳುನಾಡಿನ ಭಕ್ತಾದಿಗಳು ತಲಕಾವೇರಿಗೆ ತೆರಳಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿದರು.

12 ದಿನಗಳ ಕಾಲ ನಡೆಯುವ ಮಹಾಪುಷ್ಕರ ಸಂಬಂಧ ಕಾವೇರಿ ನದಿ ತಟದ ವಿವಿಧೆಡೆಗಳಲ್ಲಿ ಸ್ನಾನಾಚರಣೆ ನಡೆಯಲಿದೆ. ಶ್ರೀರಂಗಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕಾವೇರಿ ತೀರ್ಥವನ್ನು ಕಲಶಗಳಲ್ಲಿ ತುಂಬಿ ಕೊಂಡೊಯ್ದರು.

ಈ ಸಂದರ್ಭ ತಲಕಾವೇರಿ ಕ್ಷೇತ್ರದ ಮುಖ್ಯ ಅರ್ಚಕ ನಾರಾಯಣಾಚಾರ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ದಕ್ಷಿಣ ಭಾಗೀರಥಿ ಕಾವೇರಿ ಪುಷ್ಕರ ಕ್ರಿಯಾ ಸಮಿತಿ ಸಂಚಾಲಕ ಮೋಹನ್‍ರಾಜ್, ಕಾರ್ಯದರ್ಶಿ ಡಾ. ಎಸ್‍ಎಲ್‍ಎನ್. ಸ್ವಾಮಿ, ಸ್ವಯಂಸೇವಕರಾದ ಡಾ. ಮುರಳೀಧರ್, ರಾಜಶೇಖರ್, ಅಮಿತ್ ಸಿ.ಜಿ ಇದ್ದರು.