ವೀರಾಜಪೇಟೆ, ಸೆ. 12: ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ರಾಧಾಕೃಷ್ಣನ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಲ್ಲಾ ಸಹಾಯಕ ಪ್ರಾಧ್ಯಾಪಕರುಗಳೂ ಡಾ. ರಾಧಾಕೃಷ್ಣನ್ ಅವರ ಉದಾತ್ತ ಜೀವನ ಮೌಲ್ಯಗಳು ಪ್ರತಿಫಲಿಸುವ ಅಂಶಗಳ ಬಗ್ಗೆ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಶಾಹಿದಾ ಶಹನವಾಜ್ ಸಂಸ್ಥೆಯ ಕೋಶಾಧಿಕಾರಿಗಳಾದ ವಾಸಂತಿ ಇದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಮುಖ್ಯಸ್ಥೆ ಬಿ.ವಿ. ಶಶಿಕಲಾ ವಹಿಸಿದ್ದರು.