ಕೂಡಿಗೆ, ಸೆ. 12: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರಿನಲ್ಲಿರುವ ಟೈನಿಟಾಟ್ ಫ್ರಿ.ಕೆ.ಜಿ. ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳಿಗೆ ರಾಧಾ ಮತ್ತು ಕೃಷ್ಣ ವೇಷ ಸ್ಪರ್ಧೆ ಮತ್ತು ಮಕ್ಕಳ ತಾಯಂದಿರಿಗೆ ಸಂಸ್ಕøತಿ ವಿನಿಮಯದ ಅಂಗವಾಗಿ ಓಣಂ ಹಬ್ಬ ಹೂವಿನ ರಂಗೋಲಿ ಬಿಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಮಾಲೀಕರಾದ ಪುಷ್ಪವರದ, ಶಿಕ್ಷಕಿ ವೀಣಾ ಮುಖೇಶ್ ಹಾಗೂ ಮಕ್ಕಳು, ಪೋಷಕರು ಇದ್ದರು.