ಮಡಿಕೇರಿ, ಸೆ. 13: ಕೆದಕಲ್ ಬಳಿ ಲಾರಿಯೊಂದರಲ್ಲಿ (ಕೆಎ 20 ಎ-733) ಅಕ್ರಮವಾಗಿ ಅಂದಾಜು ರೂ. 2 ಲಕ್ಷ ಮೌಲ್ಯದ ಹಲಸಿನ ಮರಗಳನ್ನು ಸಾಗಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಮರ ಸಹಿತ ಲಾರಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಅರಣ್ಯ ವಲಯಾಧಿಕಾರಿ ಕೆ.ಪಿ. ರಂಜನ್ ಹಾಗೂ ಸಿಬ್ಬಂದಿಗಳಾದ ಚರಣ್, ಸುಬ್ರಮಣಿ, ಚಂದ್ರ, ದಿನೇಶ, ಸಂತೋಷ್ ಇವರುಗಳು ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ್ದು, ಮಹಮ್ಮದ್ ಆಲಿ ಹಾಗೂ ಚಾಲಕ ದೀಪಕ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.