ನಾಪೆÇೀಕ್ಲು, ಸೆ. 14 : ನಾಪೆÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘವು ಪ್ರಸÀಕ್ತ ಸಾಲಿನಲ್ಲಿ ರೂ. 24,92,720 ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೂರಂಬಡ ಉದಯ ಶಂಕರ್ ಹೇಳಿದರು. ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ವಿವರಣೆ ನೀಡಿದರು.

ಸಂಘದಲ್ಲಿ 2412 ಜನ ಸದಸ್ಯರಿದ್ದು, ರೂ. 20,06,19181 ಠೇವಣಿಯನ್ನು ಹೊಂದಿದೆ. ರೂ. 86,02,202 ಪಾಲು ಬಂಡವಾಳ ವನ್ನು ಹೊಂದಿದೆ. ಸಂಘವು ಸದಸ್ಯರಿಗೆ ಪ್ರಸಕ್ತ ಸಾಲಿನಲ್ಲಿ 19 ಕೋಟಿ 25 ಲಕ್ಷ ಸಾಲವನ್ನು ನೀಡಿದ್ದು ಶೇಕಡ 95 ರಷ್ಟು ವಸೂಲಾತಿಯಾಗಿದ್ದು ಕೆ.ಸಿ.ಸಿ. ಸಾಲ ಶೇ 99 ವಸೂಲಾತಿ ಯಾಗಿದ್ದು “ಎ” ತರಗತಿಯನ್ನು ಹೊಂದಿದೆ ಎಂದರು.

ಸಂಘದಿಂದ ಮಧ್ಯಮಾವಧಿ ಕೃಷಿ ಸಾಲವನ್ನು ನೀಡಲಾಗುತ್ತಿದ್ದು, ಕೆರೆಗೆ ಗರಿಷ್ಠ 60 ಸಾವಿರ, ಗೋದಾಮು ಸಾಲ ಗರಿಷ್ಠ 5 ಲಕ್ಷ ಎಕ್ರೆಗೆ 50 ಸಾವಿರದಂತೆ, ಕಾಂಕ್ರಿಟ್ ಕಣ ಸಾಲ 5 ಲಕ್ಷ ಎಕ್ರೆಗೆ 50 ಸಾವಿರದಂತೆ, ಕೃಷಿ ಯಂತ್ರೋಪಕರಣ ಸಾಲ 6 ಲಕ್ಷ ಅಥವಾ ಕೋಟೇಷನ್‍ನ ಶೇಕಡ 80 ರಷ್ಟು ಮತ್ತು ಕೃಷಿಯೇತರ ಸಾಲಗಳು : ವಾಹನ ಸಾಲ ಗರಿಷ್ಠ 6 ಲಕ್ಷ ಅಥವಾ ಕೋಟೇಷನ್‍ನ ಶೇ 75 ರಷ್ಟು, ಜಾಮೀನು ಸಾಲ 15 ಸಾವಿರ, ಆಭರಣ ಸಾಲ ಗ್ರಾಂ ಗೆ 2 ಸಾವಿರ ಮತ್ತು ಸ್ವಸಹಾಯ ಗುಂಪುಗಳಿಗೆ ಸಾಲವನ್ನು ನೀಡಲಾಗುವದು ಎಂದರು.

ಸಂಘವು ಮಾರಾಟ ಮಳಿಗೆ, ಅಕ್ಕಿಗಿರಣಿ, ಟ್ರ್ಯಾಕ್ಟರ್, ಗೊಬ್ಬರ ಮಾರಾಟ ಮಳಿಗೆಯನ್ನು ಹೊಂದಿದೆ ಎಂದ ಅವರು ಸಂಘದಲ್ಲಿ ರಾತ್ರಿ ಕಾವಲುಗಾರನನ್ನು ನೇಮಿಸಲಾಗಿದ್ದು ಸಂಘದಲ್ಲಿ ಇ ಸ್ಟಾಂಪ್ ವ್ಯವಸ್ಥೆ ಇದ್ದು ಲಾಕರ್ ವ್ಯವಸ್ಥೆಯನ್ನು ಹೊಂದಿದೆ ಎಂದರು. ಸಂಘದಲ್ಲಿ ಯಶಸ್ವಿನಿ ಯೋಜನೆ ಇದ್ದು ಇದರ ಸದುಪಯೋಗವನ್ನು ಸದಸ್ಯರು ಪಡೆದು ಕೊಳ್ಳುವಂತೆ ಕೋರಿದರು. ಅದರಂತೆ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಡಿಗ್ರಿ ಸ್ನಾತಕೋತ್ತರ ಪದವಿಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಲಾಗುವದು ಎಂದರು

ಸಂಘದ ಹೊಸ ಕಟ್ಟಡವನ್ನು 80 ಲಕ್ಷ ರೂ. ಗಳಲ್ಲಿ ಮೊದಲ ಅಂತಸ್ತು ಸೇರಿ ಮೇಲೆ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದ್ದು ಕಾಮಗಾರಿ ಯನ್ನು ಒಂದು ವರ್ಷದೊಳಗೆ ಮುಗಿಸಲು ಗುತ್ತಿಗೆದಾರನಿಗೆ ತಿಳಿಸಲಾಗಿದ್ದು, ಸದಸ್ಯರುಗಳು ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಈ ವರ್ಷ ಸಂಘದಿಂದ ನೀಡುವ ಡಿವಿಡೆಂಡ್ ಅನ್ನು ಬಿಟ್ಟು ಕೊಟ್ಟು ಸಹಕರಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಾಂಡಂಡ ಜಯ ಕರುಂಬಯ್ಯ, ಬೋಪ್ಪೆರ ಕಾವೇರಪ್ಪ, ಅರೆಯಡ ಅಶೋಕ, ಪಾಡಿಯಮ್ಮಂಡ ಮುರುಳಿಧರ್, ಕುಲ್ಲೇಟಿರ ಅರುಣ ಬೇಬ, ಕೇಟೋಳಿರ ಹರೀಶ್ ಪೂವಯ್ಯ, ಹೆಚ್.ಎ. ಬೊಳ್ಳು, ಕೇಲೆಟೀರ ಮಾಲ ಬೋಪಯ್ಯ, ಕುಂಡ್ಯೋಳಂಡ ಕವಿತ ಮುತ್ತಣ್ಣ, ಕಾರ್ಯನಿರ್ವಾಹಣಾಧಿಕಾರಿ ಶಿವಚಾಳಿಯಂಡ ವಿಜೂ ಪೂಣಚ್ಚ ಇದ್ದರು.