ಕುಶಾಲನಗರ, ಸೆ. 15: ಕುಶಾಲನಗರ ಮೂಲದ ಯುವಕನೋರ್ವ ನೆರೆಯ ಆಂಧ್ರಪ್ರದೇಶ ರಾಜ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣ ವರದಿಯಾಗಿದೆ. ಕುಶಾಲನಗರದ ಬೋಪಯ್ಯ ಮತ್ತು ದೇಚಮ್ಮ ದಂಪತಿಗಳ ಪುತ್ರ ಟಿ.ಬಿ.ಅಯ್ಯಪ್ಪ (25) ಚಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.ಬೆಂಗಳೂರಿನಿಂದ ತನ್ನ ಕಚೇರಿ ಸಹಾಯಕನೊಂದಿಗೆ ಕಾರಿನಲ್ಲಿ ತಿರುಪತಿಗೆ ತೆರಳುತ್ತಿದ್ದ ಸಂದರ್ಭ ಕಾರು ಲಾರಿವೊಂದಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾರು ಚಾಲಿಸುತ್ತಿದ್ದ ಅಯ್ಯಪ್ಪ ಸ್ಥಳದಲ್ಲೇ ಮೃತಪಟ್ಟರೆ ಸಹಾಯಕ ದುರ್ಗಾ ಪ್ರಸಾದ್ ಗಂಭೀರ ಗಾಯಗೊಂಡು ಚಿತ್ತೂರಿನ ಆಸ್ಪತ್ರೆಗೆ ದಾಖಲಾಗಿರುವದಾಗಿ ತಿಳಿದು ಬಂದಿದೆ. ಮೃತನ ಪೋಷಕರು ಚಿತ್ತೂರಿಗೆ ತೆರಳಿದ್ದಾರೆ.

ಮೃತ ಅಯ್ಯಪ್ಪ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇಚಮ್ಮ ಅವರ ಏಕೈಕ ಪುತ್ರ.