ವೀರಾಜಪೇಟೆ, ಸೆ. 15: ತಮಿಳುನಾಡಿನ ಕೊಯಮತ್ತೂರುನಲ್ಲಿ ನಡೆದ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಗೋಜೂರ್ಯೂ ಕರಾಟೆ ಶಾಲೆಯ 14 ಮಂದಿ ವಿದ್ಯಾರ್ಥಿಗಳಲ್ಲಿ 7 ಮಂದಿ ಚಿನ್ನದ ಪದಕ, 8 ಮಂದಿ ಬೆಳ್ಳಿ ಹಾಗೂ 11 ಮಂದಿ ಕಂಚಿನ ಪದಕ ಪಡೆದಿದ್ದಾರೆ.

ತಾ. 10 ರಂದು ನಡೆದ ಕರಾಟೆ ಪಂದ್ಯಾಟದಲ್ಲಿ ಕೊಡಗಿನ ನಾಪೋಕ್ಲುವಿನ ರಾಮ ಟ್ರಸ್ಟ್, ಕಕ್ಕಬೆಯ ಕೆ.ಸಿ.ಎಸ್.ಸಿ, ಅರಮೇರಿ ಎಸ್.ಎಂ.ಎಸ್., ವೀರಾಜಪೇಟೆಯ ಸಂತ ಅನ್ನಮ್ಮ, ಕೂರ್ಗ್‍ವ್ಯಾಲಿ ಹಾಗೂ ರೋಟರಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಕೊಡಗು ಜಿಲ್ಲೆಯ 6 ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 7 ಚಿನ್ನ 8 ಬೆಳ್ಳಿ, 11 ಕಂಚಿನ ಪದಕ ಪಡೆದಿದ್ದಾರೆ.

ಕರಾಟೆ ಶಿಕ್ಷಕ ಸೆನ್‍ಸಾಯ್ ಎಂ.ಬಿ. ಚಂದ್ರನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.