ವೀರಾಜಪೇಟೆ, ಸೆ. 15: ವೀರಾಜಪೇಟೆ ನಿಸರ್ಗ ಲೇಔಟ್‍ನ ತಟ್ಟಂಡ ಸುರೇಶ್ ಎಂಬವರ ಮನೆಯಲ್ಲಿ ನಡೆದ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಡಿ.ವೈಎಸ್ಪಿ ನಾಗಪ್ಪ ತಿಳಿಸಿದ್ದಾರೆ.

ದರೋಡೆ ಯತ್ನ ನಡೆದ ಮನೆಗೆ ಇಂದು ಖುದ್ದು ಭೇಟಿ ನೀಡಿ ಪರಿಶೀಲಿಸಿದ ನಾಗಪ್ಪ ಅವರು ದರೋಡೆ ನಡೆದ ಎದುರು ಮನೆಯ ಮೇಲಿನ ಸಿ.ಸಿ.ಕ್ಯಾಮೆರಾ ಕೆಟ್ಟಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ವಿಳಂಬವಾಗುತ್ತಿದೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ವರದಿ ಆರೋಪಿಗಳ ಪತ್ತೆಗೆ ಸಹಕಾರಿ ಯಾಗಿದೆ. ತನಿಖಾ ತಂಡಗಳು ನಾಲ್ಕು ದಿಕ್ಕುಗಳಲ್ಲಿಯೂ ಕಣ್ಗಾವಲಿರಿಸಿ ಶೋಧನೆ ಮುಂದುವರೆಸಿವೆ ಎಂದರು.

ಸುರೇಶ್ ದಂಪತಿಯ ಪ್ರಕಾರ ಬೆಡ್ ರೂಮಿನ ಅಲ್ಮೇರಾವನ್ನು ತೆರೆದಿದ್ದರೂ ಯಾವದೇ ಸಾಮಗ್ರಿಗಳಾಗಲಿ, ನಗದು ಆಗಲಿ ಚಿನ್ನಾಭರಣವಾಗಲಿ ದರೋಡೆಕೋರ ರಿಗೆ ದೋಚಲು ಸಾಧ್ಯವಾಗಿಲ್ಲ.

ವೀರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.