ಸೋಮವಾರಪೇಟೆ, ಸೆ. 15: ಕಳೆದ ಎರಡು ವರ್ಷಗಳಿಂದ ಐಗೂರು ಮತ್ತು ಸೋಮವಾರಪೇಟೆ ಪಟ್ಟಣದಲ್ಲಿ ಸಂಘಟನೆಗೊಂಡಿದ್ದ ಶಿವಾಜಿ ಸೇನೆಯ ಕಾರ್ಯಕರ್ತರು ಇದೀಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಿಂದೂಪರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದು, ಈ ಹಿನ್ನೆಲೆ ಶಿವಾಜಿ ಸೇನೆಯನ್ನು ವಿಸರ್ಜಿಸಲಾಗಿದೆ ಎಂದು ಸೇನೆಯ ಅಧ್ಯಕ್ಷರಾಗಿದ್ದ ಭರತ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇನ್ನು ಮುಂದೆ ಶಿವಾಜಿ ಸೇನೆಯೆಂಬ ಹೆಸರಿನಲ್ಲಿ ಯಾವದೇ ರೀತಿಯ ಕಾರ್ಯ ಚಟುವಟಿಕೆಗಳು ನಡೆಯುವದಿಲ್ಲ. ತಕ್ಷಣದಿಂದಲೇ ಶಿವಾಜಿ ಸೇನೆಯ ಎರಡು ಘಟಕಗಳನ್ನು ವಿಸರ್ಜಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಅರುಣ್‍ಕುಮಾರ್, ಸೋಮವಾರಪೇಟೆಯ ನಗರ ಸಮಿತಿಯ ಅಧ್ಯಕ್ಷ ಮಿಲನ್, ಕಾರ್ಯದರ್ಶಿ ಡಿ.ಯೋಗೇಶ್ ಉಪಸ್ಥಿತರಿದ್ದರು.