ಮಡಿಕೇರಿ, ಸೆ. 19: ಶನಿವಾರಸಂತೆಯ ಸುಪ್ರಜ ಗುರುಕುಲದಲ್ಲಿ ಪ್ರಗತಿ ಪತ್ರ ವಿತರಣೆ ಹಾಗೂ ಮಕ್ಕಳ ಮಾರುಕಟ್ಟೆ ಕಾರ್ಯಕ್ರಮ ಗಮನ ಸೆಳೆಯಿತು. ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಸಲುವಾಗಿ ಪ್ರತಿ ತಿಂಗಳು ಒಂದೊಂದು ತರಗತಿ ಮಕ್ಕಳಿಗೆ ಮಾರುಕಟ್ಟೆ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಮಕ್ಕಳ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಇನ್ನಿತರ ವಸ್ತುಗಳು, ತಯಾರಿಸಿದ ಉತ್ಪನ್ನಗಳನ್ನು ಮಾರಾಟಕ್ಕಿ ಡಲಾಗುತ್ತದೆ. ಶಿಕ್ಷಕ ವೃಂದ ಹಾಗೂ ಪೋಷಕರು, ಸಾರ್ವಜನಿಕರು ಪಾಲ್ಗೊಳ್ಳುತ್ತಾರೆ. ಇದರಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನ ವೃದ್ಧಿಯಾಗಲಿದೆ ಎಂದು ಗುರುಕುಲದ ಮುಖ್ಯಸ್ಥೆ ಡಿ. ಸುಜಲಾದೇವಿ ಹೇಳಿದರು.

ಈ ಬಾರಿ ಎರಡನೇ ತರಗತಿ ಮಕ್ಕಳಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪುಟಾಣಿ ಮಕ್ಕಳು ನುರಿತ ವ್ಯಾಪಾರಿಗಳಂತೆ ಮಾರಾಟ ಮಾಡಿ ಹೊಸ ಅನುಭವ ಪಡೆದುಕೊಂಡರು.