ಸೋಮವಾರಪೇಟೆ, ಸೆ. 19: ಮೈಸೂರು ದಸರಾ ಅಂಗವಾಗಿ ತಾ. 23 ರಿಂದ ಮೈಸೂರಿನ ಅರಮನೆ ಮೈದಾನದಲ್ಲಿ ನಡೆಯುವ ಯುವ ದಸರಾ ಕಾರ್ಯಕ್ರಮಕ್ಕೆ ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡ ಆಯ್ಕೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್ ಟೆನ್ನಿ ಕುರಿಯನ್ ತಿಳಿಸಿದ್ದಾರೆ. ಇತ್ತೀಚೆಗೆ ಮೈಸೂರು ಮಾನಸ ಗಂಗೋತ್ರಿಯ ತೆರೆದ ಸಭಾಂಗಣದಲ್ಲಿ ನಡೆದ ‘ಯುವ ಸಂಭ್ರಮ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯರೂಪಕ ಯುವ ದಸರಾಕ್ಕೆ ಆಯ್ಕೆಯಾಗಿದೆ. ಕಾಲೇಜಿನ ಉಪನ್ಯಾಸಕರಾದ ಶಿಲ್ಪಾಶ್ರಿ ಮತ್ತು ಹೆಚ್.ಎಸ್. ಶರಣ್ ತರಬೇತಿ ನೀಡಿದ್ದಾರೆ ಎಂದು ಟೆನ್ನಿ ಕುರಿಯನ್ ತಿಳಿಸಿದ್ದಾರೆ.