ವೀರಾಜಪೇಟೆ, ಸೆ. 21: ಅಮ್ಮತ್ತಿಯಲ್ಲಿ ಅಡಿಕೆ ಮರವನ್ನು ಕತ್ತರಿಸುತ್ತಿದ್ದಾಗ ಆಕಸ್ಮಿಕವಾಗಿ ಮರ ಮುರಿದು ಬಿದ್ದು ಕಾರ್ಮಿಕ ಎಚ್.ರವಿ (42) ಎಂಬಾತ ಸಾವನ್ನಪ್ಪಿದ್ದು, ಇಲ್ಲಿನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಳಿಗ್ಗೆ ಅಮ್ಮತ್ತಿಯ ಸುರೇಶ್ ಎಂಬವರ ಅಡಿಕೆ ತೋಟದಲ್ಲಿ ಅಡಿಕೆ ಮರಗಳನ್ನು ಕತ್ತರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಡಿಕೆ ಮರ ರವಿಯ ಸೊಂಟದ ಮೇಲೆ ಬಿದ್ದು ಗಂಭೀರ ಸ್ವರೂಪದ ಗಾಯ ಗೊಂಡಿದ್ದು ಈತನನ್ನು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ನಿನ್ನೆ ದಿನ ಸಾವನ್ನಪ್ಪಿರುವದಾಗಿ ಪೊಲೀಸರು ತಿಳಿಸಿದ್ದಾರೆ.