ಮಡಿಕೇರಿ, ಸೆ. 22: ಚಿತ್ತಾರ ದೃಶ್ಯ ವಾಹಿನಿಯು ನವರಾತ್ರಿ ಅಂಗವಾಗಿ, ತಾ. 24ರಂದು 6ನೇ ವರ್ಷದ ‘ದಸರಾ ಚಿತ್ತಾರ’ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಕಾವೇರಿ ಕಲಾಕ್ಷೇತ್ರದಲ್ಲಿ ಭಾವಗೀತೆ, ಜನಪದಗೀತೆ, ಭರತನಾಟ್ಯ ಸ್ಪರ್ಧೆಗಳು ನಡೆಯಲಿವೆ. ಅಹರಾಹ್ನ ಸೀನಿಯರ್, ಜೂನಿಯರ್, ಸಬ್ ಜೂನಿಯರ್ ವಿಭಾಗದಲ್ಲಿ ಸೋಲೋ ಮತ್ತು ಗ್ರೂಪ್ ಡ್ಯಾನ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಅದೇ ದಿನ ಸಂಜೆ ಬಹುಮಾನ ವಿತರಿಸಲಾಗುತ್ತದೆ.

ಸಮಾರೋಪ ಸಮಾರಂಭವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಇಂಟಕ್ ಮುಖಂಡ ನಾಪಂಡ ಮುತ್ತಪ್ಪ, ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹಾಗೂ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಕುಟ್ಟಪ್ಪ ಪಾಲ್ಗೊಳ್ಳಲಿದ್ದಾರೆ. ಚಿತ್ತಾರ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ರೈ ಅಧ್ಯಕ್ಷತೆ ವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧsನೆ ಮಾಡಿದ ಐವರು ಸಾಧಕರನು ಗೌರವಿಸಲಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಪೊನ್ನಂಪೇಟೆಯ ಟಿ.ಆರ್. ವಿನೋದ್, ಚಿತ್ರಕಲೆಯಲ್ಲಿ ಮೂರ್ನಾಡಿನ ಐಮಂಡ ರೂಪೇಶ್ ನಾಣಯ್ಯ, ಭರತನಾಟ್ಯದಲ್ಲಿ ಮೂರ್ನಾಡಿನ ಜಲಜಾ ನಾಗರಾಜ್ ಮತ್ತು ಗಾಯನ ಕ್ಷೇತ್ರದಲ್ಲಿ ಮಡಿಕೇರಿಯ ಗೋವಿಂದ ರಾಜು ಅವರು ಸನ್ಮಾನ ಸ್ವೀಕರಿಸಲಿದ್ದಾರೆ.