ಮಡಿಕೇರಿ, ಸೆ. 22: ಐತಿಹಾಸಿಕ ಮಡಿಕೇರಿ ದಸರಾ - ಜನೋತ್ಸವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಇಂದು ಸಂಜೆ ಚಾಲನೆ ದೊರೆಯಿತು.ಗಾಂಧಿ ಮೈದಾನದಲ್ಲಿ ನಿರ್ಮಾಣ ಗೊಂಡಿರುವ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾಗಿರುವ ಚಿನ್ನಸ್ವಾಮಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವದೇ ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಒಗ್ಗೂಡಲು ದಸರಾ ಉತ್ಸವ ಅಗತ್ಯ. ಈ ಉತ್ಸವದ ಐತಿಹಾಸಿಕ ಹಿನ್ನೆಲೆಯನ್ನು ಅವಲೋಕನ ಮಾಡಬೇಕಿದೆ. ಶಾಂತಿ- ಸೌಹಾರ್ದತೆ ಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ಸು ಗೊಳಿಸುವಂತೆ ಕೋರಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕಳೆದೆರಡು ವರ್ಷ ಕಡಿಮೆ ಅನುದಾನದಲ್ಲೂ ಎಲ್ಲರ ಸಹಕಾರದಿಂದ ದಸರಾ ಯಶಸ್ವಿಯಾಗಿದೆ. ಈ ಬಾರಿ ಆರಂಭದಲ್ಲಿಯೇ ದಸರಾ ಸಮಿತಿ ಸಲಹೆಗಾರರು ಹಾಗೂ ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷರಾದ ಜಿ. ಚಿದ್ವಿಲಾಸ್ ಅವರು, ಬೈಲಾ ತಿದ್ದುಪಡಿ ಸಭೆ ಏರ್ಪಡಿಸಲಾಗಿದ್ದು, ಗೊಂದಲ ಉಂಟಾಯಿತು. ಪರ-ವಿರೋಧಗಳು ಕೇಳಿಬಂದವು. 1987ರಲ್ಲಿ ಆಗಿನ ಪರಿಸ್ಥಿತಿಗೆ ರಚನೆಯಾದ ಬೈಲಾ ಇದೀಗ ಅಗತ್ಯ ತಿದ್ದುಪಡಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು. ಇದೀಗ ಮತ್ತೆ ಕಡಿಮೆ ಅವಧಿಯಲ್ಲಿ ತರಾತುರಿಯಲ್ಲಿ ದಸರಾ ಆಚರಿಸುವ ಪರಿಸ್ಥಿತಿ ಎದುರಾಗಿದ್ದು, ಏನಾದರೂ ಲೋಪಗಳು ಕಂಡುಬಂದಲ್ಲಿ ಹಿರಿಯರು ಮನ್ನಿಸಿ ಆಶೀರ್ವದಿಸಬೇಕೆಂದು ಹೇಳಿದರಲ್ಲದೆ, 9 ದಿನಗಳ ಕಾಲ ನಡಯುವ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.

ದಸರಾ ಸಮಿತಿ ಹಾಗೂ ನಗರಸಭಾ ಅಧ್ಯಕ್ಷರೂ ಆಗಿರುವ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ, ಕಾರ್ಯದರ್ಶಿ, ಆಯುಕ್ತೆ ಬಿ. ಶುಭ, ನಗರಸಭಾ ಸದಸ್ಯರುಗಳು, ವಿವಿಧ ಉಪಸಮಿತಿಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಇದ್ದರು. ಇದಕ್ಕೂ ಮುನ್ನ ಶ್ರೀಕೃಷ್ಣ ಉಪಾಧ್ಯಾಯರಿಂದ ಸಾಂಪ್ರದಾಯಿಕ ದುರ್ಗಿ ಪೂಜೆ ನೆರವೇರಿತು. ಮಂಞಂಡ್ರ ರೇಖಾ ಉಲ್ಲಾಸ್ ಪ್ರಾರ್ಥಿಸಿದರೆ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.