ಮಡಿಕೇರಿ, ಸೆ. 23: ನಗರದ ನಾಲ್ಕು ಶಕ್ತಿ ದೇವತೆಗಳ ಪೈಕಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 87ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಕೆ. ಸುರೇಶ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ದೇವಿ ಪುರಾಣದಿಂದ ಆಯ್ದ ‘ಚಾಮುಂಡೇಶ್ವರಿಯಿಂದ ಮಹಿಷಾಸುರ ಮರ್ದನ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‍ನ ಜಾನ್ ಎಲೆಕ್ಟ್ರಿಕಲ್‍ನವರು ಲೈಟಿಂಗ್ ಬೋರ್ಡ್ ಹಾಗೂ ಧ್ವನಿವರ್ಧಕ ಅಳವಡಿಸಲಿದ್ದು, ಬೆಂಗಳೂರಿನ ಯು ನೇಮ್ ಇಟ್-ಯು ವಿಲ್ ಗೆಟ್‍ಇಟ್’ ಸಂಸ್ಥೆಯವರು ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದ್ದಾರೆ.

18 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಉದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಹೇಮ್‍ರಾಜ್ (ಹೇಮು) ಮತ್ತು ತಂಡ ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಮಾಡಲಿದ್ದು, ಕಲಾಕೃತಿಗಳಿಗೆ ಚಲನ-ವಲನ ವ್ಯವಸ್ಥೆ ಹಾಗೂ ಪ್ಲಾಟ್ ಫಾರಂ ನಿರ್ಮಾಣವನ್ನು ಸಮಿತಿ ಸದಸ್ಯರೆ ಮಾಡಲಿದ್ದಾರೆ ಎಂದು ಸುರೇಶ್ ಮಾಹಿತಿಯಿತ್ತರು.

ಒಟ್ಟು 14 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗು ತ್ತಿದ್ದು, ಬೆಂಗಳೂರಿನ ಚೇತನ್ ಕೂಲ್‍ಫೈರ್ ಅಳವಡಿಸಲಿದ್ದಾರೆ. ಸುಳ್ಯದ ನಾಸಿಕ್ ಬ್ಯಾಂಡ್ ಮಂಟಪವನ್ನು ಮುನ್ನಡೆ ಸಲಿದ್ದು, ಜನಾಕರ್ಷಣೆ ಯೊಂದಿಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವದೆಂದು ಸುರೇಶ್ ವಿವರಿಸಿದರು. - ಉಜ್ವಲ್‍ರಂಜಿತ್