ಮಡಿಕೇರಿ, ಸೆ. 23: ದಸರಾ ಉತ್ಸವದ ಪ್ರಯುಕ್ತ ಇಂದು ದಸರಾ ಕ್ರೀಡಾ ಸಮಿತಿ ವತಿಯಿಂದ ಮುಕ್ತ ಮೆರಥಾನ್ ಓಟ ನಡೆಯಿತು.ಜಿ.ಟಿ. ವೃತ್ತದಲ್ಲಿ ಡಿವೈಎಸ್ಪಿ ಸುಂದರ್‍ರಾಜ್ ಚಾಲನೆ ನೀಡಿದರು. ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ‘ಶಕ್ತಿ’ ಸಂಪಾದಕರಾದ ಜಿ. ಚಿದ್ವಿಲಾಸ್, ಬೃಂದಾವನ ಕೂರ್ಗ್ ಮಾಲೀಕ ಕುಕ್ಕೇರ ಜಯ ಚಿಣ್ಣಪ್ಪ, ವೃತ್ತ ನಿರೀಕ್ಷಕರುಗಳಾದ ಮೇದಪ್ಪ, ಪ್ರದೀಪ್ ಕುಮಾರ್, ಠಾಣಾಧಿಕಾರಿ

(ಮೊದಲ ಪುಟದಿಂದ) ವೆಂಕಟರಮಣ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಕೆ. ಜಗದೀಶ್ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್, ಕಾರ್ಯದರ್ಶಿ ಗಳಾದ ರಾಜೇಶ್, ಸುನಿಲ್ ಎನ್.ಸಿ., ಉಪಾಧ್ಯಕ್ಷರುಗಳಾದ ಬಿ.ಎಂ. ಹರೀಶ್, ಸುನಿಲ್, ಸಹ ಕಾರ್ಯದರ್ಶಿಗಳಾದ ಡಿಶು, ದೀಪಕ್ ಮತ್ತಿತರರು ಇದ್ದರು.

ಇಂದು ಕ್ರೀಡಾಕೂಟ :ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ತಾ. 24ರಂದು (ಇಂದು) ನಡೆಯುವ ದಸರಾ ಕ್ರೀಡಾಕೂಟ ಸಮಾರಂಭವನ್ನು ಬೆಳಿಗ್ಗೆ 10.30 ಗಂಟೆಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸ ಲಿರುವರು. ಕ್ರೀಡಾಕೂಟವನ್ನು ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉದ್ಘಾಟಿಸುವರು.