ಕುಶಾಲನಗರ, ಸೆ. 23: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಬಳಿ ಇಂದು ಅಪರಾಹ್ನ ನಾಲ್ವರು ವಿದ್ಯಾರ್ಥಿಗಳು ಸ್ನಾನಕ್ಕೆಂದು ಕಾವೇರಿ ಹೊಳೆಗೆ ಬಂದಿದ್ದು, ಈ ಪೈಕಿ ಒಬ್ಬಾತ ನೀರು ಪಾಲಾಗಿರುವ ದುರ್ಘಟನೆ ಸಂಭವಿಸಿದೆ.ಕುಶಾಲನಗರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮೂಲತಃ ಸಕಲೇಶಪುರ ನಿವಾಸಿ ಜಾನ್ ಪೀಟರ್ ಎಂಬವರ ಪುತ್ರ ಪ್ರಶಾಂತ್ ಮೆಲ್ವಿನ್ (16) ಎಂಬಾತನೇ ಮೃತ ದುರ್ದೈವಿ. ಇಂಜಿನಿಯರಿಂಗ್ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ಪ್ರಶಾಂತ್ ಹಾಗೂ ಮೂವರು ಸ್ನೇಹಿತರು ಸಂಜೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದಾರೆ.

ಈ ವೇಳೆ ಪ್ರಶಾಂತ್ ಸುಳಿಯಲ್ಲಿ ಸಿಲುಕಿರುವ ಸಂಭವವಿದ್ದು, ಜೊತೆಗಾರರು ತಿಳಿಸಿದ ಮೇರೆಗೆ ಹಾಸ್ಟೆಲ್ ವಾರ್ಡನ್ ಯೋಗಾನಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆ ಮೇರೆಗೆ ಧಾವಿಸಿದ ಪೊಲೀಸ್ ಠಾಣಾಧಿಕಾರಿ ಎ. ಜಗದೀಶ್ ಹಾಗೂ ಸಿಬ್ಬಂದಿ ಚಂದ್ರಶೇಖರ್, ರಾಜೇಶ್, ಗಣೇಶ್ ಮತ್ತು ಮುಳುಗು ತಜ್ಞ ರಾಮಕೃಷ್ಣ ಹುಡುಕಾಟ ನಡೆಸಿದರೂ, ಮುಸ್ಸಂಜೆಯಲ್ಲಿ ಶವ ಪತ್ತೆಯಾಗಿಲ್ಲ. ಇನ್ನು ತಾ. 24ರಂದು (ಇಂದು) ಶೋಧ ಮುಂದುವರಿ ಯಲಿದ್ದು, ಮೃತನÀ ಪೋಷಕರಿಗೆ ಸುದ್ಧಿ ರವಾನಿಸಿರುವದಾಗಿ ತಿಳಿದು ಬಂದಿದೆ. ಚಿತ್ರ - ವರದಿ

: ಟಿ.ಜಿ. ಸತೀಶ್ / ಸಿಂಚು