ಕುಶಾಲನಗರ, ಸೆ. 24: ಕುಡಿತ ಮತ್ತು ಜೂಜಾಟಕ್ಕೆ ತನ್ನ ಮನೆಯ ಬಾಗಿಲು ಮುರಿದು ಮನೆಯ ಮಗನೆ ಕಳ್ಳತನ ಮಾಡಿದ ಪ್ರಕರಣ ಕೂಡಿಗೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಡುಮಂಗಳೂರು ನವಗ್ರಾಮದ ಪ್ರೇಮ ಎಂಬವರ ಮನೆಯ ಹಿಂದಿನ ಬಾಗಿಲು ಮುರಿದು 30 ಸಾವಿರ ನಗದು ಮತ್ತು ಕೆಲವು ವಸ್ತುಗಳು ಕಳುವಾದ ಬಗ್ಗೆ ಪ್ರಕರಣ ದಾಖಲಾದ ಹಿನ್ನೆಲೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ.ಮಹೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ಪ್ರೇಮ ಅವರ ಪುತ್ರ ವಿಷಕಂಠ ಎಂಬಾತ ಕಳ್ಳತನ ಮಾಡಿರುವದು ಬೆಳಕಿಗೆ ಬಂದಿದೆ.

ಜೂಜಾಟಕ್ಕೆ ಹಣದ ಅವಶ್ಯಕತೆ ಇದ್ದ ಸಂದರ್ಭ ಈ ಕಳ್ಳತನ ನಡೆದಿದ್ದು ವಿಚಾರಣೆ ಸಂದರ್ಭ ತಿಳಿದು ಬಂದಿದ್ದು ವಿಷಕಂಠ ಮತ್ತು ಕೃತ್ಯಕ್ಕೆ ಸಹಕರಿಸಿದ ಸ್ಥಳೀಯ ಗ್ರಾಮಪಂಚಾಯಿತಿ ಉಪಾಧ್ಯಕ್ಷರ ಪುತ್ರ ಕೀರ್ತಿ ಎಂಬಾತನನ್ನು ಬಂಧಿಸಲಾಗಿದೆ. ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಠಾಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.