ಗೋಣಿಕೊಪ್ಪಲು,ಸೆ.26: ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯುತ್ತಿರುವ 39ನೇ ವರ್ಷದ ದಸರಾ ಆಚರಣೆ ಅಂಗವಾಗಿ ತಾ. 27 ರಂದು (ಇಂದು) ರಾತ್ರಿ 8.30 ಗಂಟೆಯಿಂದ ಕೊಡವ ನೈಟ್ಸ್ ಸಿಂಫೆÇೀನಿ ತಂಡದಿಂದ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ದಸರಾ ಕವಿಗೋಷ್ಠಿ ಹಾಗೂ ಸಂಜೆ 6.30 ರಿಂದ ರಿಫ್ಲೆಕ್ಷನ್ ಡ್ಯಾನ್ಸ್ ಶಾಲೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಯನ್ ಚಿಟ್ಟಿಯಪ್ಪ ಅವರಿಂದ ನೃತ್ಯ ಕಾರ್ಯಕ್ರಮವಿದೆ.

ಕುಲ್ಲಚಂಡ ಪ್ರಮೋದ್‍ಗಣಪತಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಶಮಂಟಪ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ, ತಾ.ಪಂ.ಸದಸ್ಯ ಜಯಾಪೂವಯ್ಯ, ಪೆÇಲೀಸ್ ಉಪನಿರೀಕ್ಷಕ ಹೆಚ್.ವೈ. ರಾಜು, ಡಾ. ಚಂದ್ರಶೇಖರ್, ವಿವಿಧ ದಸರಾ ಸಮಿತಿ ಅಧ್ಯಕ್ಷರಾದ ಅಜ್ಜಿಕುಟ್ಟಿರ ರಿಷಿ ಕಾವೇರಪ್ಪ, ಕರ್ಣರಾಜ್, ಕಾಡ್ಯಮಾಡ ಚೇತನ್, ಕೆ.ಎಂ. ಸೋಮಣ್ಣ, ಬಿ.ಇ. ಕಿರಣ್, ಅನೀಶ್, ಕೆ. ರಾಜೇಶ್, ಚಿಯಕ್‍ಪೂವಂಡ ಸುಬ್ರಮಣಿ, ಅಜ್ಜಿಕುಟ್ಟಿರ ಸಜನ್, ಹೆಚ್.ಆರ್. ಪರಶುರಾಮ್ ಭಾಗವಹಿಸಲಿದ್ದಾರೆ.