ಮಡಿಕೇರಿ, ಸೆ. 26: ಹಿಲ್ ರಸ್ತೆ ಮತ್ತು ಮಹದೇವಪೇಟೆಯ ಕೂಡು ರಸ್ತೆ ಬದಿ ಡಾ. ರವಿ ಅಪ್ಪಾಜಿ ಅವರ ಕಟ್ಟಡ ಹಿಂಭಾಗ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಮಹದೇವಪೇಟೆಯ ವ್ಯಾಪಾರಿ ನಜೀರ್ ಮತ್ತಿತರರು ಮನವಿ ಸಲ್ಲಿಸಿದ್ದಾರೆ.

ಆ ಸ್ಥಳದ ವ್ಯಾಪ್ತಿಯಲ್ಲಿ ಆಸ್ಪತ್ರೆ, ಮಾರ್ಕೆಟ್ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓಡಾಡುವ ಪ್ರದೇಶವಾಗಿರುವದರಿಂದ ಅಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಕೊಟ್ಟರೆ ತೊಂದರೆ ಎದುರಾಗಲಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಮನವಿಯನ್ನು ಜಿಲ್ಲಾಧಿಕಾರಿ ಹಾಗೂ ಅಬಕಾರಿ ಇಲಾಖೆ ಉನ್ನತಾಧಿಕಾರಿಗಳಿಗೆ ಸಲ್ಲಿಸಲಾಗಿದೆ.