ಸಿದ್ದಾಪುರ, ಸೆ. 27: ಕಾಫಿ ತೋಟವೊಂದರ ಒಳಗಿರುವ ದೇವಾಲಯದ ವಿಗ್ರಹಗಳನ್ನು ಕಳವು ಮಾಡಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಇಲ್ಲಿನ ಪಾಲಿಬೆಟ್ಟ ರಸ್ತೆಯಲ್ಲಿರುವ ವಡ್ಡರಕಾಡು ಕಾಫಿ ತೋಟದಲ್ಲಿರುವ ಗಣಪತಿ ದೇವಾಲಯದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿ 1 ಅಡಿ ಎತ್ತರದ ಪಂಚಲೋಹದ ಗಣಪತಿ ಹಾಗೂ ಇನ್ನೊಂದು ವಿಗ್ರಹಗಳನ್ನು ಕಳವು ಮಾಡಿದ್ದಾರೆ ತೋಟದ ಒಳಗಿರುವ ದೇವಾಲಯಕ್ಕೆ ಪೂಜೆ ಮಾಡಲು ಆರ್ಚಕರು ತೆರಳಿದ ಸಂದರ್ಭದಲ್ಲಿ ಕಳವಾಗಿರುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ತೋಟದ ಉಸ್ತುವಾರಿಯನ್ನು ನೋಡಿಕೊಂಡಿರುವ ಬಾಬು ಎಂಬವರು ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.