ಕರಿಕೆ, ಅ. 1: ಸಂಪಾಜೆ ವಲಯದ ಪಟ್ಟಿ ಘಾಟ್ ರಕ್ಷಿತ ಅರಣ್ಯ ದಲ್ಲಿ ಬೀಟೆ ಹಾಗೂ ತೇಗದ ಮರವನ್ನು ಕತ್ತರಿಸಿ ಕಳವು ಮಾಡುತ್ತಿದ್ದಾಗ ರಾತ್ರಿ ಗಸ್ತಿನಲ್ಲಿದ್ದ ವಲಯ ಅರಣ್ಯಾಧಿಕಾರಿ ಕು. ಶಮ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಸಂದರ್ಭ ಆರೋಪಿಗಳಾದ ಬಂಡಡ್ಕ ಮಹೇಶ್ ಹಾಗೂ ಯು.ಆರ್. ಗಿರೀಶ ಎಂಬ ಆರೋಪಿಗಳು ಮಾಲುಸಮೇತ ಸಿಕ್ಕಿಬಿದ್ದಿದ್ದಾರೆ. ಅಂದಾಜು 50,000 ಮೌಲ್ಯದ 4 ಬೀಟೆ ಮತ್ತು 2 ತೇಗದ ಮರದ ನಾಟ ಹಾಗೂ ಒಂದು ಮರ ತುಂಡರಿಸುವ ಯಂತ್ರವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ ಕಾರ್ಯಾಚರಣೆಯಲ್ಲಿ ಉಪವಲಯಾರಣ್ಯಧಿಕಾರಿ ಧರ್ಮೇಂದ್ರ, ಅರಣ್ಯ ರಕ್ಷಕ ಲೋಕಯ್ಯ, ರಂಗನಾಥ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. -ಸುಧೀರ್