ಸೋಮವಾರಪೇಟೆ, ಅ. 1: ಸೋಮವಾರಪೇಟೆ ಪಟ್ಟಣದಲ್ಲೂ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಇಲ್ಲಿನ ದಿ.ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜ್ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಹಸಿವು ಮುಕ್ತ ರಾಜ್ಯದ ಕನಸು ಇಂತಹ ಜನಪ್ರಿಯ ಯೋಜನೆಗಳಿಂದ ಸಾಕಾರಗೊಳ್ಳುತ್ತದೆ. ಸೋಮವಾರ ಪೇಟೆ ಸೇರಿದಂತೆ ರಾಜ್ಯದ ಪ್ರತಿ ತಾಲೂಕಿನಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸ ಬೇಕು ಎಂದು ಮನವಿಯಲ್ಲಿ ಗಮನ ಸೆಳೆದಿದ್ದಾರೆ.