ಮಡಿಕೇರಿ ಆಕಾಶವಾಣಿ ಕೇಂದ್ರದ ಮಾಜಿ ನಿಲಯ ನಿರ್ದೇಶಕಿ ಇಂದಿರಾ ಏಸುಪ್ರಿಯ ಗಜರಾಜ್ (63) ಮಡಿಕೇರಿಯಲ್ಲಿ ಹೃದಯಾಘಾತ ದಿಂದ ತಾ. 1 ರಂದು (ಇಂದು) ಮುಂಜಾನೆ ನಿಧನರಾಗಿದ್ದಾರೆ. 1999ರಲ್ಲಿ ಮಡಿಕೇರಿ ಆಕಾಶವಾಣಿ ಯಲ್ಲಿ ಸೇವೆಗೆ ಬಂದು ಸುದ್ದಿ ಹಾಗೂ ಸಾಕಷ್ಟು ಸಾಹಿತ್ಯಕ ವಿಷಯದಲ್ಲಿ ಕಾರ್ಯಕ್ರಮ ಪ್ರಾರಂಭಿಸಿದರು. ಅವುಗಳು ಜನಪ್ರಿಯವಾಗಿವೆ. ಮೃತರು 2014ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿ ಮಡಿಕೇರಿಯಲ್ಲಿ ನೆಲೆಸಿದ್ದರು.

ಸಂತಾಪ: ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಸಂತಾಪ ಸೂಚಿಸಿದ್ದಾರೆ.