ಕೂಡಿಗೆ, ಅ. 1: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಹುಲಸೆ ಗ್ರಾಮದ ಶಿವನಂಜಪ್ಪ ಅವರ ಪುತ್ರ ನವೀನ್ ಬೈಕ್‍ನಲ್ಲಿ ಹೆಬ್ಬಾಲೆ ಕಡೆಯಿಂದ ಕಣಿವೆ ಕಡೆಗೆ ಬರುವಾಗ ಮಾರುತಿ ವ್ಯಾನ್‍ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನವೀನ್ ತಲೆಗೆ ತೀವ್ರ ಪೆಟ್ಟಾದ ಕಾರಣ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಸಾವನ್ನಪ್ಪಿದ್ದಾನೆ. ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.