ಮಡಿಕೇರಿ, ಅ. 3: ಖ್ಯಾತ ಉದ್ಯಮಿ ದಿ. ಆದಿಕೇಶವಲು ಅವರ ಮೊಮ್ಮಗ ಗೀತ ವಿಷ್ಣುನನ್ನು ಮಡಿಕೇರಿ ನಗರದಲ್ಲಿ ಬಂಧಿಸಿರುವದಾಗಿ ‘ಶಕ್ತಿ’ಗೆ ಮೂಲವೊಂದರಿಂದ ತಿಳಿದು ಬಂದಿದೆ.ಸೆ. 27 ರಂದು ಬೆಂಗಳೂರಿನ ಜಯನಗರ ಪ್ರದೇಶದಲ್ಲಿ ಗಾಂಜಾ ಪ್ರಭಾವದಿಂದ ಗೀತ ವಿಷ್ಣು ಅವರ ಕಾರು ಅವಘಟಕ್ಕೀಡಾಗಿತ್ತು. ಈ ಸಂದರ್ಭ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಿಂದ ತಪ್ಪಿಸಿಕೊಂಡ ಗೀತ ವಿಷ್ಣು ಕಳೆದ 4 ದಿನಗಳಿಂದ ಚೆನ್ನೈ, ಹೈದರಾಬಾದ್, ಗೋವಾಗಳಲ್ಲಿ ತಲೆಮರೆಸಿಕೊಂಡಿದ್ದು, ನಿನ್ನೆ ಮಡಿಕೇರಿಯ ರಾಣಿ ಪೇಟೆಯಲ್ಲಿರುವ ಹೋಂಸ್ಟೇ ಒಂದರಲ್ಲಿ ತಂಗಿದ್ದುದಾಗಿ ತಿಳಿದು ಬಂದಿದೆ.