ಮಡಿಕೇರಿ, ಅ. 2: ಹಲವು ಕಾರಣಗಳಿಂದ ಖಿನ್ನತೆಗೆ ಒಳಗಾಗಿದ್ದ ಗೃಹಿಣಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ರಿವಾಲ್ವರ್‍ನಿಂದ ತನ್ನ ಹಣೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಂಭವಿಸಿದೆ.ಇಲ್ಲಿನ ಸುಬ್ರಹ್ಮಣ್ಯನಗರ ಕಾರ್ತಿಕ ರಸ್ತೆ ನಿವಾಸಿ ಎಂ.ಎಸ್. ಗಣೇಶ ಶೆಣೈ ಎಂಬವರ ಪತ್ನಿ ವಾಣಿ (45) ಎಂಬಾಕೆ ಭಯಾನಕ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ಮೃತರ ಪತಿ ಭಾಗಮಂಡಲ ಕಾಶಿಮಠದ ಭುವನೇಂದ್ರ ಆಯುರ್ವೇದ ವೃಕ್ಷವಾಟಿಕ ಕ್ಷೇತ್ರದ ವ್ಯವಸ್ಥಾಪಕರಾಗಿದ್ದು, ಘಟನೆ ಬಗ್ಗೆ ನೀಡಿರುವ ಹೇಳಿಕೆ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪತಿಯ ಹೇಳಿಕೆ ಮೇರೆಗೆ ಮೊಕದ್ದಮೆ ದಾಖಲಾಗಿದೆ.

ಪತಿ ಗಣೇಶ್ ಶೆಣೈ ಭಾಗಮಂಡಲದಲ್ಲಿ ಕೆಲಸದಲ್ಲಿದ್ದು, ಮನೆಯಲ್ಲಿ ಪತ್ನಿ ವಾಣಿ ಹಾಗೂ ಮಗ ಆದಿತ್ಯ, ಪುಟ್ಟ ಮಗಳು ನಾಲ್ಕನೇ ತರಗತಿಯ ಸಿರಿ ಮನೆಯಲ್ಲಿ ಇದ್ದರು. ಮೃತರ ಮಾವ ಬಾಗಿಲು ಹಾಕಿಕೊಂಡು ಪಕ್ಕದ ಕೋಣೆಯಲಿಂಡಿi್ಲ ಮಲಗಿದ್ದಾಗಿ ತಿಳಿದುಬಂದಿದೆ.

ಈ ವೇಳೆ ವಾಣಿ ಮಗ ಆದಿತ್ಯನಿಗೆ ಹಾಲು ತರುವಂತೆ ಹೇಳಿ ಕಳುಹಿಸಿದ್ದು, ಈತ ಹಾಲು ತೆಗೆದುಕೊಂಡು ಅಂಗಡಿಯಿಂದ ಹಿಂತಿರುಗುವಷ್ಟರಲ್ಲಿ ರಿವಾಲ್ವರ್‍ನಿಂದ ಹಣೆಗೆ ಗುಂಡು ಹೊಡೆದುಕೊಂಡು ಕೋಣೆಯಲ್ಲಿ ರಕ್ತದ ಮಡುವಿನೊಂದಿಗೆ ಬಿದ್ದಿರುವದು ಗೋಚರಿಸಿದೆ. ವಿಷಯ ತಿಳಿದ ಮಾವ ಶ್ರೀನಿವಾಸ್ ಶೆಣೈ ಹಾಗೂ ಮಗ ಆದಿತ್ಯ

(ಮೊದಲ ಪುಟದಿಂದ) ಭಾಗಮಂಡಲದಲ್ಲಿದ್ದ ಗಣೇಶ್ ಶೆಣೈ ಅವರಿಗೆ ವಿಷಯ ತಿಳಿಸಿದ ಮೇರೆಗೆ ಮೃತರ ಪತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ, ಆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಮಹಜರು ನಡೆಸಿ, ಶವವನ್ನು ವೈದ್ಯಕೀಯ ಮರಣೋತ್ತರ ಪರೀಕ್ಷೆಗೆ ಒಳಪಡಿಸುವದರೊಂದಿಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೆಳಿಗ್ಗೆ ಘಟನೆ ಸಂಭವಿಸಿದ್ದರೂ ಕೂಡ ಸಂಜೆ ನಾಲ್ಕು ಗಂಟೆ ತನಕ ಮೃತರ ಸಂಬಂಧಿಕರು ಬರುವ ತನಕ ಮನೆಯ ಕೋಣೆಯಲ್ಲಿ ಶವವನ್ನು ಯಥಾ ಸ್ಥಿತಿಯಲ್ಲೇ ಇರಿಸಿದ್ದು ಗೋಚರಿಸಿತು.

ಆ ಬಳಿಕವಷ್ಟೇ ಸಂಬಂಧಿಕರ ಸಮಕ್ಷಮ ಶವ ಮಹಜರು ಸ್ಥಳದಿಂದ ಮರಣೋತ್ತರ ಪರೀಕ್ಷೆಗೆ ಒಯ್ಯಲಾಯಿತು. ಮಹಿಳೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಒಳಗಾಗಿರುವ ವಿಷಯ ತಿಳಿದು ಸುತ್ತಮುತ್ತಲಿನ ಮಹಿಳೆಯರು ಹಾಗೂ ಮೃತರ ಸಂಬಂಧಿಕರು ದಿಗ್ಭ್ರಮೆ ವ್ಯಕ್ತಪಡಿಸಿ, ವಾಣಿಯ ಶವ ನೋಡಿ ಹಿಂತಿರುಗುತ್ತಿದ್ದುದು ಕಂಡು ಬಂತು.

ನಗರ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ ಹಾಗೂ ಸಿಬ್ಬಂದಿ ಸ್ಥಳ ಮಹಜರು ಸಹಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.