ಮಡಿಕೇರಿ, ಅ. 2: ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಯುವ ಘಟಕದ ವತಿಯಿಂದ 40 ವರ್ಷ ಕೆಳಪಟ್ಟ ಯುವಕ ಯುವತಿಯರಿಗಾಗಿ ಮುಂದಿನ ತಾ. 29 ರಂದು ಬೆಂಗಳೂರಿನ ಗೌಡ ಸಮಾಜದ ‘ನಮ್ಮನೆ’ ಸಭಾಂಗಣದಲ್ಲಿ ‘ಯುವತರಂಗ’ ಯುವ ಮೇಳ ಕಾರ್ಯಕ್ರಮ ಏರ್ಪಡಿಸಿದೆ.

ಹತ್ತು ಕುಟುಂಬ ಹದಿನೆಂಟು ಗೋತ್ರದ ಯುವಕರನ್ನು ಒಂದೇ ಮಹಡಿಯಡಿ ಸೇರಿಸಿ ಉದ್ಯೋಗಾನ್ವೇಷಣೆ ಮತ್ತು ಸಮಾಲೋಚನೆ, ವಸ್ತು ಪ್ರದರ್ಶನ, ಪ್ರತಿಭಾ ಪ್ರದರ್ಶನ, ಉದ್ಯಮಶೀಲತೆಯ ಪರಿಚಯ, ಆಹಾರ ಮಳಿಗೆ, ಕೃಷಿ ಸಂಶೋಧನೆ ಮತ್ತು ನಾವಿನ್ಯತೆ, ಮೋಜಿನ ಆಟೋಟಗಳು, ಫ್ಯಾಷನ್ ಶೋ, ಸಾಂಸ್ಕೃತಿಕ ಪ್ರದರ್ಶನ, ರಕ್ತ ದಾನ ಮತ್ತು ಅಂಗ ದಾನ ಪ್ರತಿಜ್ಞೆ ಕ್ಯಾಂಪ್ ಇನ್ನಿತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಭಾಗವಹಿಸುವ ಇಚ್ಛೆ ಇರುವವರು ಪ್ರಶಾಂತ್ ಅಡ್ಕಾರ್ (9886883043) ನೇಹ ಪೋರೆಯನ (9844300378) ಮಿಥುನ್ ಚೀಯಪನ (9739904249) ಚೇತನ್ ಚೆದುಕಾರು (9740196916) ದಿಲೀಪ್ ಮೂಲೆಮಜಲು (9739317871) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಈ-ಮೇಲ್ : ಞಜಞಥಿouಣhತಿiಟಿgs@gmಚಿiಟ.ಛಿom ವೆಬೆಸೈಟ್:ತಿತಿತಿ.ಞಜಞgoತಿಜಚಿsಚಿmಚಿರಿಚಿ.ಛಿom ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ಘಟಕದ ಪ್ರಕಟಣೆ ತಿಳಿಸಿದೆ.