ಮಡಿಕೇರಿ, ಅ. 2: ಅರೆಭಾಷೆ ಗೌಡ ಸಂಘ ಐಗೂರು ಹಾಗೂ ಕೊಡಗು ಗೌಡ ಯುವ ವೇದಿಕೆ ಸಹಯೋಗದೊಂದಿಗೆ ಗೌಡ ಜನಾಂಗದವರ 4ನೇ ವರ್ಷದ ಕೈಲ್ ಮುಹೂರ್ತ ಸಂತೋಷ ಕೂಟ ತಾ. 8 ರಂದು ಯಡವಾರೆ ಕಿರಿಯ ಪ್ರಾಥಮಿಕ ಆವರಣದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 8.30 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ನಿವೃತ್ತ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚೆರಿಯಮನೆ ಎಂ.ರಾಮಪ್ಪ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅರೆಭಾಷೆ ಗೌಡ ಸಂಘದ ಅಧ್ಯಕ್ಷ ತೊತ್ತಿಯನ ಕೇಶವಯ್ಯ ವಹಿಸುವರು. ಇದೇ ಸಂದರ್ಭ ಸಂಘದ ವ್ಯಾಪ್ತಿಗೆ ಒಳಪಡುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಳೇರಮ್ಮನ ಪಾಲಾಕ್ಷ ಪ್ರೋತ್ಸಾಹ ಧನ ನೀಡುವರು. ನಂತರ ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ವಿವಿಧ ಆಟೋಟಗಳು ನಡೆಯಲಿವೆ.

ಮಧ್ಯಾಹ್ನ 3 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಘದ ಅಧ್ಯಕ್ಷ ತೊತ್ತಿಯನ ಎ.ಕೇಶವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗೌಡ ಸಂಘದ ಗೌರವ ಅಧ್ಯಕ್ಷ ಪೊನ್ನಚ್ಚನ ಕೆ.ಗಣಪತಿ, ಚೆರಿಯಮನೆ ರಾಮಪ್ಪ ಕೊಡಗು ಯುವವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರುಗಳು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮ ನೀಡಲಿಚ್ಛಿಸುವವರು ನಂಗಾರು ಗಿರೀಶ್ ಕುಮಾರ್ (8762549768) ಬಾರನ ಭರತ್ ಕುಮಾರ್ (9449339807) ಇವರು ಗಳನ್ನು ಸಂಪರ್ಕಿಸಬಹುದಾಗಿದೆ.