ವೀರಾಜಪೇಟೆ, ಅ.2: ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಸಭೆ ನಡೆದು ಅಮ್ಮತ್ತಿ ಹಾಗೂ ಬಾಳೆಲೆ ಹೋಬಳಿಗಳ ಸುಮಾರು 8 ಮಂದಿ ಒತ್ತುವರಿದಾರರ ಭೂಮಿಯನ್ನು ಸಕ್ರಮಗೊಳಿಸಲು ತೀರ್ಮಾನಿಸಲಾಯಿತು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮ್ಮತ್ತಿ ಕಳತ್ಮಾಡು ಗ್ರಾಮದ 6 ಮಂದಿ, ಹೊಸಕೋಟೆಯ ಒಬ್ಬರು ಹಾಗೂ ಬಾಳೆಲೆ ಹೋಬಳಿಯ ನಲ್ಲೂರು ಗ್ರಾಮದ ಒಬ್ಬರು ಸೇರಿದಂತೆ ಒಟ್ಟು 8 ಮಂದಿಯ ಒತ್ತುವರಿಯನ್ನು ಸಕ್ರಮಗೊಳಿಸಲಾಯಿತು.

ಇಲ್ಲಿನ ಶಾಸಕರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯ ರಾಮಕೃಷ್ಣ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.