ಮಡಿಕೇರಿ, ಅ. 5: ವೀರಾಜಪೇಟೆ ತಾಲೂಕಿನ ಕದನೂರು ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಸಭೆ ಮೈತಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಕ್ಷೇತ್ರ ಅಧ್ಯಕ್ಷ ಅರುಣ್ ಭೀಮಯ್ಯ ಸಮ್ಮುಖದಲ್ಲಿ ಕದನೂರು ಗ್ರಾ.ಪಂ.ನ ಕಾಂಗ್ರೆಸ್ ಸದಸ್ಯೆ ಪೊಯ್ಯೇಟಿರ ವಾಣಿ, ಮಾಜಿ ಸದಸ್ಯ ಎ.ಸಿ. ಲಕ್ಷ್ಮಣ್, ಕಾಂಗ್ರೆಸ್ ಕಾರ್ಯಕರ್ತ ಹೆಚ್.ಪಿ. ಜಗನ್ನಾಥ್ ಬಿಜೆಪಿಗೆ ಸೇರ್ಪಡೆಗೊಂಡರು.