ಭಾಗಮಂಡಲ, ಅ. 5: ಕಾವೇರಿ ನದಿ ಸ್ವಚ್ಛತಾ ಆಂದೋಲನದಿಂದ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ದೇವಾಲಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ಆಂದೋಲನದ 20 ಮಂದಿಯ ತಂಡ ಭಾಗವಹಿಸಿದ್ದು, ಈ ಸಂದರ್ಭ ಕಾವೇರಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತಹ ಭಿತ್ತಿ ಪತ್ರವನ್ನು ತಕ್ಕಮುಖ್ಯಸ್ಥ ರಾದ ಕೋಡಿ ಮೋಟಯ್ಯ ಬಿಡುಗಡೆಗೊಳಿಸಿದರು.

ನಾರಾಯಣಾಚಾರ್ ಮಾತನಾಡಿ, ಮನೆ ಮನೆಯಿಂದಲೇ ಸ್ವಚ್ಛತಾ ಕಾರ್ಯವನ್ನು ಮಾಡಿದಲ್ಲಿ ಸ್ವಚ್ಛ ಸಮಾಜ ನಿರ್ಮಾಣವಾಗಲಿದೆ ಎಂದರು. ಈ ಸಂದರ್ಭ ಆಂದೋಲನದ ಸಂಚಾಲಕ ಚಂದ್ರಮೋಹನ್, ಗ್ರಾ.ಪಂ. ಸದಸ್ಯ ರಾಜಾರೈ, ಪುರುಷೋತ್ತಮ ಹಾಗೂ ಇನ್ನಿತರರು ಇದ್ದರು.