ಮಡಿಕೇರಿ, ಅ. 4: ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾದ ನಂತರ ವಿವಿಧ ಸಂಘ ಸಂಸ್ಥೆಗಳು ರಥಯಾತ್ರೆಯ ಮೂಲಕ ತೀರ್ಥ ವಿತರಿಸುವದು ಕಾವೇರಿ ತುಲಾಸಂಕ್ರಮಣದ ಧಾರ್ಮಿಕ ಆಚಾರ, ವಿಚಾರಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರಾದ ಉಳ್ಳಿಯಡ ಪೂವಯ್ಯ, ತಲಕಾವೇರಿಯಲ್ಲಿ ತೀರ್ಥೋದ್ಭವವಾದ ನಂತರ ಬಿಂದಿ ಗೆಗಳಲ್ಲಿ ತೀರ್ಥವನ್ನು ಕೊಂಡೊಯ್ದು ಡ್ರಮುಗಳಲ್ಲಿ ಶೇಖರಿಸಿಟ್ಟು ಊರೂರುಗಳಲ್ಲಿ ಹಂಚಲಾಗುತ್ತಿದೆ. ಇದು ಕಾವೇರಿ ತುಲಾ ಸಂಕ್ರಮಣದ ಆಚಾರ ವಿಚಾರಗಳಿಗೆ ವಿರುದ್ಧ ವಾಗಿದ್ದು, ತೀರ್ಥರೂಪಿಣಿ ಕಾವೇರಿಯನ್ನು ಕಣ್ತುಂಬಿಕೊಳ್ಳುವ ಭಕ್ತರ ಉತ್ಸಾಹವನ್ನು ಕಸಿದು ಕೊಂಡಂತ್ತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪÀÅಣ್ಯಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಬೇಕೆ ಹೊರತು ಕಡಿಮೆಯಾಗ ಬಾರದು. ರಥಯಾತ್ರೆಯ ಮೂಲಕ ತಾವಿದ್ದಲ್ಲಿಗೆ ತೀರ್ಥ ಬರುತ್ತದೆ ಎಂದಾದರೆ ಪÀÅಣ್ಯಕ್ಷೇತ್ರ ತಲಕಾವೇರಿಗೆ ತೆರಳಿ ತೀರ್ಥ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಪೂವಯ್ಯ ಅಭಿಪ್ರಾಯಪಟ್ಟರು.

ತೀರ್ಥೋದ್ಭವದ ಸಂದರ್ಭ ಕುಂಡಿಕೆಗೆ ರಾಸಾಯನಿಕ ಮಿಶ್ರಿತ ಕುಂಕುಮ ಮತ್ತು ಹೂವುಗಳನ್ನು ಹೆಚ್ಚಾಗಿ ಹಾಕುತ್ತಿರುವದರಿಂದ ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶವೂ ತಪ್ಪಿಹೋಗುತ್ತದೆ. ಅಲ್ಲದೆ, ಪವಿತ್ರ ತೀರ್ಥದ ನೈಜ

(ಮೊದಲ ಪುಟದಿಂದ) ಗುಣ ಮರೆಯಾಗಿ ವರ್ಷಪÀÇರ್ತಿ ತೀರ್ಥದ ನೈಜತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷಗಳಿಂದ ದೇವಾಲಯ ವ್ಯವಸ್ಥಾಪನಾ ಸಮಿತಿಯನ್ನು ರಚಿಸದಿರುವದೇ ಭಾಗಮಂಡಲ ಮತ್ತು ತಲಕಾವೇರಿಯ ಅವ್ಯವಸ್ಥೆಗಳಿಗೆ ಮೂಲ ಕಾರಣವೆಂದು ಅವರು ಆರೋಪಿಸಿದರು.

ವೇದಿಕೆಯ ಸಂಚಾಲಕ ಕೊಕ್ಕಲೆರ ಎ.ಕಾರ್ಯಪ್ಪ ಮಾತನಾಡಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲವನ್ನು ಸುಮಾರು 15 ಕೊಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆಯಾದರೂ ಇಲ್ಲಿಯವರೆಗೆ ಮುಖ್ಯ ದ್ವಾರವನ್ನು ಅಳವಡಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇಡಿಕೆಗಳು: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರು ಪವಿತ್ರ ಸ್ನಾನ ಮಾಡುವದರಿಂದ ಅಲ್ಲಿ ನದಿಯ ನೀರಿನ ಮಟ್ಟವನ್ನು ನಾಲ್ಕು ಅಡಿಗಳಿಗೆ ಸೀಮಿತವಾಗಿರುವಂತೆ ವ್ಯವಸ್ಥೆ ಮಾಡಬೇಕು, ಕೇಶಮುಂಡನ ಮಾಡಿಸಿಕೊಂಡ ಭಕ್ತರು ‘ಪಿಂಡ ಪ್ರದಾನ’ ಮಾಡಲು ಪಿಂಡ ಸಾಮಗ್ರಿಗಳಿಗೆ ಬಹಳಷ್ಟು ದೂರ ನಡೆಯಬೇಕಾಗಿದೆ. ಪ್ರಯಾಸದಲ್ಲಿ ದೂರ ಕ್ರಮಿಸುವ ಬದಲು ಅವನ್ನು ಸಮೀಪದಲ್ಲಿಯೇ ಮಾರಾಟಕ್ಕೆ ಇಡುವಂತೆ ವ್ಯವಸ್ಥೆ ಮಾಡುವದು, ಪಿಂಡ ಸಾಮಗ್ರಿಗಳನ್ನು ತುದಿ ಬಾಳೆ ಎಲೆಯಲ್ಲಿ ಇರಿಸುವದು ಸಂಪ್ರದಾಯ. ಮಾರಾಟಗಾರರು ನೀಡುವ ಈ ತುದಿ ಬಾಳೆ ಎಲೆ ಗಾತ್ರದಲ್ಲಿ ತೀರಾ ಚಿಕ್ಕದಾಗಿದ್ದು, ಪಿಂಡ ಕ್ರಿಯೆ ನಡೆಸುವಾಗ, ಇದರೊಂದಿಗೆ ನೆಲದ ಮಣ್ಣು, ಮರಳು ಸೇರಿಕೊಂಡು ಪಿಂಡಪ್ರದಾನ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ. ಈ ವಿಷಯದಲ್ಲಿ ಸಂಬಂಧಿಸಿದ ಗುತ್ತಿಗೆದಾರರು- ಮಾರಾಟಗಾರರಿಗೆ ಸೂಕ್ತ ಮುನ್ಸೂಚನೆ ನೀಡಬೇಕು, ಪಿಂಡ ಸಾಮಗ್ರಿಗಳ ದರ ಫಲಕವನ್ನು ಭಕ್ತಾದಿಗಳಿಗೆ ಸ್ಪಷ್ಟವಾಗಿ ಕಾಣಿಸುವಂತೆ ಅಳವಡಿಸಬೇಕು, ತ್ರಿವೇಣಿ ಸಂಗಮದಲ್ಲಿ ಮಹಿಳೆಯರು ಸೇರಿದಂತೆ ಭಕ್ತಾದಿಗಳು ಸ್ನಾನ ಮಾಡುವ ಸಂದರ್ಭ ಕಿಡಿಗೇಡಿಗಳಿಂದ ಮುಜುಗರ ಎದುರಾಗದಂತೆ ಸೂಕ್ತ ಬಂದೋಬಸ್ತು ವ್ಯವಸ್ಥೆ ಕಲ್ಪಿಸುವದು ಅಥವಾ ಫೋಟೋ ತೆಗೆಯುವದನ್ನು ನಿಷೇಧಿಸಬೇಕು, ಸಾರ್ವಜನಿಕ ಶೌಚಾಲಯದ ನಿರ್ವಹಣೆ, ಮೇಲುಸ್ತುವಾರಿಗೆ ಕನ್ನಡ ಸೇರಿದಂತೆ ಸ್ಥಳೀಯ ಭಾಷೆ ಗೊತ್ತಿಲ್ಲದ ವ್ಯಕ್ತಿಗಳನ್ನು ನೇಮಿಸುವದರಿಂದ ಭಕ್ತಾದಿಗಳಿಗೆ ಮುಜುಗರವಾಗುತ್ತಿದೆ. ಭಕ್ತಾದಿಗಳಿಂದ ಶೌಚಾಲಯ ಬಳಕೆಗೆ ಹೆಚ್ಚಿನ ಹಣವನ್ನು ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಶೌಚಾಲಯದಲ್ಲಿ ಸಮರ್ಪಕ ನೀರಿನ ಸೌಲಭ್ಯ ಇಲ್ಲದೇ ತೊಂದರೆ ಆಗುವದ್ನು ತಪ್ಪಿಸಲು, ಸಮರ್ಪಕ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕು, ಭಾಗಮಂಡಲ ಶ್ರೀ ಭಗಂಡೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗು ವಂತೆ ‘ದೂರುಪೆಟ್ಟಿಗೆ’ಯನ್ನು ಇಡಬೇಕು, ತಲಕಾವೇರಿ ಸ್ನಾನ ಕೊಳದ ನೀರಿನ ಮಟ್ಟವನ್ನು ಮೂರುವರೆ ಅಡಿಗಳಿಗೆ ಸೀಮಿತ ಗೊಳಿಸಿ ಹಳೆಯ ನೀರನ್ನು ಶುದ್ಧೀಕರಿ ಸುವದು, ತಲಕಾವೇರಿಯಲ್ಲಿಯೂ ಸಮೃದ್ಧಿಯಾಗಿ ನೀರಿನ ಸೌಕರ್ಯಕ್ಕೆ ಸಮರ್ಪಕ ವ್ಯವಸ್ಥೆ ಮಾಡಬೇಕು.

ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭ ಸ್ಥಳೀಯ ಭಕ್ತಾದಿಗಳ ಭಜನೆ, ನಾಮ ಸಂಕೀರ್ತನೆ ಇತ್ಯಾದಿ ಭಕ್ತಿಯ ಚಟುವಟಿಕೆಗಳಿಗೆ ತಡೆಯೊಡ್ಡಬಾರದು, ಪವಿತ್ರ ತೀರ್ಥೋದ್ಭವದ ಸಂದರ್ಭ ಪುಣ್ಯ ಕುಂಡಿಕೆಯ ಸುತ್ತ ರಾಜಕಾರಣಿಗಳು, ಅಧಿಕಾರ ವರ್ಗದವರು ಸಂಸಾರ ಸಮೇತರಾಗಿ ನಿಂತು ನೂಕನುಗ್ಗಲಿಗೆ ಅವಕಾಶ ಮಾಡುವದನ್ನು ತಪ್ಪಿಸಬೇಕು. ಭಾಗಮಂಡಲ-ತಲಕಾವೇರಿ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಶುಚಿತ್ವದ ವಾತಾವರಣ ಕಂಡು ಬಂದಿದ್ದು, ಪಾವಿತ್ರ್ಯತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾವೇರಿ ಜಾತ್ರೆಯ ಬಂದೋಬಸ್ತ್ ಕರ್ತವ್ಯಕ್ಕೆ ಹಾಜರಾಗುವ ಪೊಲೀಸ ರಾದಿಯಾಗಿ ಎಲ್ಲಾ ರಕ್ಷಣಾ ಸಿಬ್ಬಂದಿ ಗಳು ಭಕ್ತಾದಿಗಳೊಂದಿಗೆ ಸೌಜನ್ಯ ದಿಂದ ವರ್ತಿಸುವಂತೆ ಸೂಚನೆಯನ್ನು ನೀಡಬೇಕೆಂದು ಉಳ್ಳಿಯಡ ಪೂವಯ್ಯ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾನೂನು ಸಲಹೆಗಾರರಾದ ರತನ್ ತಮ್ಮಯ್ಯ, ಕೆ.ಕೆ. ಮುತ್ತಣ್ಣ, ಕೊಡವ ಮಕ್ಕಡ ಕೂಟದ ಅಧ್ಯಕ್ಷÀ ಬೊಳ್ಳಜ್ಜಿರ ಅಯ್ಯಪ್ಪ ಹಾಗೂ ತಿರಿ ಬೊಳ್ಚ ಕೊಡವ ಸಂಘದ ಅಧ್ಯಕ್ಷ ಉಳ್ಳಿಯಡ ಡಾಟಿ ಪÀÇವಯ್ಯ ಉಪಸ್ಥಿತರಿದ್ದರು.