ಸೋಮವಾರಪೇಟೆ,ಅ.5: ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಎಸ್.ಡಿ. ವಿಜೇತ್ ಆಯ್ಕೆಯಾಗಿದ್ದಾರೆ.ಇಲ್ಲಿನ ಕಸಾಪ ಭವನದಲ್ಲಿ ನಡೆದ ಸಭೆಯಲ್ಲಿ ಎರಡನೇ ಅವಧಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಇದುವರೆಗೂ ಅಧ್ಯಕ್ಷರಾಗಿದ್ದ ಜವರ ಅವರನ್ನು ಜಿಲ್ಲಾ ಸಮಿತಿಗೆ ಆಯ್ಕೆಗೊಳಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಕೋಶಾಧಿಕಾರಿ ಮುರಳೀಧರ್, ಸಮಿತಿ ಸದಸ್ಯರುಗಳಾದ ನಾಗರಾಜ್‍ಶೆಟ್ಟಿ, ಅಶ್ವಥ್, ಕವನ್ ಕಾರ್ಯಪ್ಪ, ಪ್ರಸನ್ನ, ಹೆಚ್.ಬಿ. ಜಯಮ್ಮ, ತಾಲೂಕು ಸಮಿತಿಯ ನಳಿನಿ ಗಣೇಶ್, ಡಿ.ಪಿ. ಲೋಕೇಶ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಎಸ್.ಡಿ. ವಿಜೇತ್ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕು ಸಮಿತಿಯನ್ನು ಪುನರ್‍ರಚಿಸಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು. ಕನ್ನಡ ನಾಡು, ನುಡಿ, ಸಾಹಿತ್ಯ, ನೆಲ, ಜಲ ರಕ್ಷಣೆ, ಜಾಗೃತಿಯ ಮೂಲಕ ಕನ್ನಡ ಕಾರ್ಯವನ್ನು ಮುಂದುವರೆಸಲಾಗುವದು ಎಂದರು.