ಗೋಣಿಕೊಪ್ಪಲು, ಅ. 5: ಮೈಸೂರು ದಸರಾ ಕ್ರೀಡಾಕೂಟದ 11 ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿಗೆ ಹಲವು ಬಹುಮಾನ ದೊರೆತಿದೆ.

ಬ್ಲ್ಯಾಕ್ ಬೆಲ್ಟ್ 51-55 ಕೆ.ಜಿ ವಿಭಾಗದಲ್ಲಿ ಡೆರಿನ್ ದೇವಯ್ಯ ತೃತೀಯ, ಕಲರ್ ಬೆಲ್ಟ್ 70 ಕೆ.ಜಿ ವಿಭಾಗದಲ್ಲಿ ಯು.ಯು ಅಮಿತ್ ದ್ವಿತೀಯ, ಪಿ.ಎ ಜ್ಞಾನೇಶ್ 51-55 ಕೆ.ಜಿ ವಿಭಾಗದಲ್ಲಿ ದ್ವಿತೀಯ ಬಹುಮಾನ, ಜೆಶ್ ಕಾವೇರಪ್ಪ 26-30 ಕೆ.ಜಿ ವಿಭಾಗದಲ್ಲಿ ತೃತೀಯ, ಬಾಲಕಿಯರ 26-30 ಕೆ.ಜಿ. ವಿಭಾಗದಲ್ಲಿ ನಿಧಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕರಾಟೆ ಪಟು ಅರುಣ್ ಮಾಚಯ್ಯ ನೇತೃತ್ವದ ಈ ತಂಡಕ್ಕೆ ತರಬೇತುದಾರರಾಗಿ ಪ್ರಸಾದ್ ದೇವಯ್ಯ, ಜೋಯಪ್ಪ, ಕಿಶೋರ್ ಹಾಗೂ ಪೊನ್ನಣ್ಣ ಕಾರ್ಯನಿರ್ವಹಿಸಿದ್ದರು.