ಶನಿವಾರಸಂತೆ, ಅ. 7: ಶನಿವಾರಸಂತೆ ಲಯನ್ಸ್ ಇಂಟರ್ ನ್ಯಾಷನಲ್ ಸೆಂಟೇನಿಯರ್ ಸಭೆಯು ಶನಿವಾರಸಂತೆ ಭಾರತೀ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್. ರವಿಕಾಂತ್ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

ಶಿಕ್ಷಣ ಕ್ಷೇತ್ರ, ಇಂಜಿನಿಯರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪದ್ಮಾವತಿ ಮಲ್ಲೇಶ್, ಮಲ್ಲಿಕಾರ್ಜುನ್, ದಯಾನಂದ, ಬಿ.ಟಿ. ಸುರೇಶ್, ಎನ್.ಸಿ. ಪರಮೇಶ್ ಮೆಗಾನ ರವಿಕಾಂತ್ ಅವರುಗಳನ್ನು ಸಭೆಯಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ಜಂಟಿ ಕಾರ್ಯದರ್ಶಿ ಎಂ.ಆರ್. ನಿರಂಜನ್ ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಸಭೆಯಲ್ಲಿ ಲಯನ್ಸ್ ಕ್ಲಬ್‍ನ ಉಪಾಧ್ಯಕ್ಷರುಗಳಾದ ಎನ್.ಬಿ. ನಾಗಪ್ಪ, ಬಿ.ಸಿ. ಧರ್ಮಪ್ಪ ನಾರಾಯಣಸ್ವಾಮಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ, ಬಿ.ಕೆ. ಚಿಣ್ಣಪ್ಪ, ಖಜಾಂಚಿ ಚಂದ್ರಶೇಖರ್, ಎ.ಎಂ. ಆನಂದ್, ಡಿ.ಎಸ್. ಪ್ರಮೋದ್ ಹಾಗೂ ಇತರ ಸದಸ್ಯರು ಹಾಜರಿದ್ದರು. ಜಯಲಲಿತಾ ಪ್ರಾರ್ಥಿಸಿ, ಕಾರ್ಯದರ್ಶಿ ಲಯನ್ಸ್ ಬಿ.ಕೆ. ಚಿಣ್ಣಪ್ಪ ನಿರೂಪಿಸಿ, ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಎಂ.ಆರ್. ನಿರಂಜನ್ ವಂದಿಸಿದರು.