ವೀರಾಜಪೇಟೆ, ಅ.7: ಅಪ್ರಾಪ್ತ ಹುಡುಗಿಯೊಂದಿಗೆ ಸ್ನೇಹ ಬೆಳೆಸಿ ಆಕೆಯನ್ನು ಸಂಬಂಧಿಕರ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮಾಂತರ ಪೊಲೀಸರು ಅಮ್ಮತ್ತಿ ಹೊಸೂರು ಗ್ರಾಮದ ಬಾಲಕನೋರ್ವನನ್ನು ಬಂಧಿಸಿದ್ದಾರೆ.

ಕಾಕೋಟುಪರಂಬು ಗ್ರಾಮದ ಬಾಲಕಿಯೋರ್ವಳಿಗೆ ವೀರಾಜಪೇಟೆ ಯಲ್ಲಿ ನಡೆದ ಗೌರಿ ಗಣೇಶೋತ್ಸª ವಿಸರ್ಜನೋತ್ಸವಕ್ಕೆ ಬಂದಿದ್ದಾಗ ಹೊಸೂರು ಗ್ರಾಮದ ಬಾಲಕನೊಬ್ಬನ ಮೊಬೈಲ್ ನಂಬರನ್ನು ಬದಲಾಯಿಸಿಕೊಂಡ ನಂತರ ಇಬ್ಬರ ನಡುವೆ ಪರಸ್ಪರ ಪ್ರೀತಿಯ ಬೆಸುಗೆ ಯಾಗಿದೆ. ಸೆ. 30 ರಂದು ಬಾಲಕ ಬಾಲಕಿಯನ್ನು ಪುಸಲಾಯಿಸಿ ಮುಂದಿನ ದಿನಗಳಲ್ಲಿ ಆಕೆಯನ್ನು ಮದುವೆಯಾಗುವದಾಗಿ ನಂಬಿಸಿ ಕರೆದುಕೊಂಡು ಬಂದು ಅಮ್ಮತ್ತಿಯ ಹೊಸೂರು ಗ್ರಾಮದ ತನ್ನ ಅಕ್ಕನ ಮನೆಯಲ್ಲಿರಿಸಿದ್ದಾನೆ. ಅಕ್ಕ ಇದನ್ನು ವಿರೋಧಿಸಿದರೂ ಅದನ್ನು ಲೆಕ್ಕಿಸದ ಬಾಲಕ ಸುಮಾರು 7 ದಿನಗಳ ತನಕ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.

ಹುಡುಗಿಯ ತಂದೆ ಮಗಳು ಕಾಣುತ್ತಿಲ್ಲ ಎಂದು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆ ಪೊಲೀಸರು ತಂಡವನ್ನು ರಚಿಸಿ ವಿಚಾರಣೆ, ತನಿಖೆ ನಡೆಸಿದ ಮೇರೆ ಬಾಲಕಿ ಹೊಸೂರು ಗ್ರಾಮದಲ್ಲಿರುವದು ಪತ್ತೆಯಾಗಿದೆ. ಇಂದು ಹೊಸೂರಿಗೆ ತೆರಳಿದ ತಂಡ ಸ್ಥಳದಲ್ಲಿಯೇ ಬಾಲಕ ಹಾಗೂ ಬಾಲಕಿಯನ್ನು ವಶಕ್ಕೆ ಪಡೆದು ಇಂದು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ನ್ಯಾಯಾಲಯಕ್ಕೆÉ ಬಾಲಕನನ್ನು ಹಾಜರುಪಡಿಸಿದ ಮೇರೆ ಆತನನ್ನು ರೀಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಯ ನಂತರ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.