ಮಡಿಕೇರಿ, ಅ. 8: ಮಡಿಕೇರಿಯ ಭಗಂಡೇಶ್ವರ ಕೊಡವ ಕೇರಿಯ ವತಿಯಿಂದ ಕೈಲ್ ಪೊಳ್ದ್ ಸಂತೋಷ ಕೂಟ ತಾ. 5 ರಂದು ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಮುಂಡಂಡ ಬಿ. ಪೂವಪ್ಪ ಅಧ್ಯಕ್ಷತೆಯಲ್ಲಿ ಆಯುಧ ಪೂಜೆಯನ್ನು ಹಿರಿಯರಾದ ನೆರವಂಡ ಪಿ. ಕರುಂಬಯ್ಯ ಅವರಿಂದ ಆರಂಭಗೊಂಡು ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಕೊಂಗೇಟಿರ ಡಬ್ಲ್ಯೂ. ಬೋಪಯ್ಯ ಮತ್ತು ಆಲೆಮಾಡ ಕೆ. ಕಾರ್ಯಪ್ಪ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.

ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಟಿ. ಅಯ್ಯಪ್ಪ, ಕೊಂಗೆಟ್ಟಿರ ಎ. ಚಂಗಪ್ಪ, ಮಣವಟ್ಟಿರ ಈ. ಚಿಣ್ಣಪ್ಪ, ಚೋಳಂಡ ತಾರಾ ಮುದ್ದಯ್ಯ, ಆಲೆಮಾಡ ಚಿತ್ರಾ ನಂಜಪ್ಪ, ಚೋವಂಡ ಕಾವೇರಿ ಕಾಳಪ್ಪ, ಮೂವೆರ ರಾಣಿ ಸುಬ್ಬಯ್ಯ ಮತ್ತು ಗೌರವ ಕಾರ್ಯದರ್ಶಿಯಾಗಿ ನಂದಿನೆರವಂಡ ಪಿ. ಚೀಯಣ್ಣ ಅವರನ್ನು ಆಯ್ಕೆ ಮಾಡಲಾಯಿತು.

ಕಂಡ್ರತಂಡ ಪಾಲಿ ಅವರು ಪತಿ ಮಾದಪ್ಪ ಜ್ಞಾಪಕಾರ್ಥ ವಿವಿಧ ಕ್ರೀಡೆ ವಿಜೇತರಿಗೆ ಮತ್ತು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲು ರೂ. 5 ಸಾವಿರ ನೆರವು ನೀಡಿದರು.

ಆಲೆಮಾಡ ಚಿತ್ರಾ ನಂಜಪ್ಪ ಪ್ರಾರ್ಥಿಸಿ, ಮಿನ್ನಂಡ ಆರ್. ಮುತ್ತಣ್ಣ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಮಣವಟ್ಟಿರ ಈ ಚಿಣ್ಣಪ್ಪ ವಂದಿಸಿದರು.