ಮಡಿಕೇರಿ, ಅ. 8: ಮಡಿಕೇರಿ ಆಕಾಶವಾಣಿ ಕೇಂದ್ರದ ಮಾಜಿ ನಿಲಯ ನಿರ್ದೇಶಕಿ ಇಂದಿರಾ ಏಸುಪ್ರಿಯ ಗಜರಾಜ್ ಅವರಿಗೆ ತಿರಿಬೊಳಚ್ ಕೊಡವ ಸಂಘದ ವತಿಯಿಂದ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ, ಸಾಹಿತಿ ನಾಗೇಶ್ ಕಾಲೂರು, ಆಕಾಶವಾಣಿ ಸುದ್ದಿ ವಾಚಕ ಎಂ.ಇ. ಮಹಮದ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಇಂದಿರಾ ಏಸುಪ್ರಿಯ ಗಜರಾಜ್ ಅವರ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಸುದ್ದಿ ವಾಚಕರಾದ ಶಾರದಾ ನಂಜಪ್ಪ, ಮಾದೇಟಿರ ಬೆಳ್ಯಪ್ಪ, ಇಂದಿರಾ ಪತಿ ಗಜರಾಜ್, ಇಂದಿರಾ ಪುತ್ರಿ ಮತ್ತಿತರರು ಇದ್ದರು.